ಚಿಕ್ಕಮಗಳೂರು: ಕೆಎಸ್ಆರ್ಟಿಸಿ ನೌಕರರ ಮುಷ್ಕರದಿಂದ ಬಸ್ ಇಲ್ಲವಾಗಿದ್ದು, ಖಾಸಗಿ ಬಸ್ಗಳಲ್ಲಿ ಜನ ಪ್ರಯಾಣ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ಡಿಪೊದಲ್ಲೇ 150ಕ್ಕೂ ಹೆಚ್ಚು ಬಸ್ಗಳು ನಿಂತಿವೆ. ಜಿಲ್ಲೆಯ ಆರು ಡಿಪೊಗಳ 560 ಬಸ್ಗಳು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳನ್ನು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಅವುಗಳನ್ನು ಶಿವಮೊಗ್ಗ, ಬೆಂಗಳೂರು, ಮೈಸೂರು ಸೇರಿ ದೂರದ ಊರುಗಳಿಗೆ ಅಧಿಕಾರಿಗಳು ಕಳುಹಿಸುತ್ತಿದ್ದಾರೆ.ಇನ್ನೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ನಿಲ್ದಾಣದಲ್ಲಿದ್ದು, ಬಸ್ಗಳಿಗಾಗಿ ಕಾದಿದ್ದಾರೆ. ಹಳ್ಳಿಗಳಿಗೆ ಖಾಸಗಿ ಬಸ್ ಕೂಡ ಇಲ್ಲವಾಗಿದ್ದು, ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ತೊಂದರೆಯಾಗಿದೆ.













































