ಕೋಲ್ಕತ್ತಾ: ನಾನು ಬದುಕಿರುವವರೆಗೂ ಪಶ್ಚಿಮ ಬಂಗಾಳದ ಜನತೆ ಭಯಪಡುವ ಅಗತ್ಯವಿಲ್ಲ. ಬಂಗಾಳದಿಂದ ಭಯ ಹೊರಹೋಗಿದೆ ಮತ್ತು ನಂಬಿಕೆ ಒಳಬಂದಿದೆ ಎಂದು ಇದು ಪಶ್ಚಿಮ ಬಂಗಾಳದ ನಿಯೋಜಿತ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಅವರು ನೀಡಿದ ಖಡಕ್ ಸಂದೇಶ ನೀಡಿದ್ದಾರೆ.
ಈ ಬಗ್ಗೆ ಶುಕ್ರವಾರ ಕೋಲ್ಕತ್ತಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಮಾತನಾಡಿ ಸುವೇಂದು, ರಾಜ್ಯದ ಜನತೆಗೆ ಹೊಸ ಭರವಸೆಯ ಬೆಳಕನ್ನು ತೋರಿದರು.ಮೋದಿ ಗ್ಯಾರಂಟಿಯೇ ನಮ್ಮ ಬದ್ಧತೆತಮ್ಮ ಭಾಷಣದ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಸುವೇಂದು, ಪ್ರಧಾನಿ ಮೋದಿ ನೀಡಿದ ಪ್ರತಿಯೊಂದು ಗ್ಯಾರಂಟಿಯನ್ನು ಬಂಗಾಳದಲ್ಲಿ ಅಕ್ಷರಶಃ ಜಾರಿಗೆ ತರಲಾಗುವುದು. ನಾವು ಕೇವಲ ಭಾಷಣ ಮಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ನಾನು ಬಿಜೆಪಿಯ ನೀತಿಗಳನ್ನು ಮಾತ್ರ ಪಾಲಿಸುತ್ತೇನೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೇಂದ್ರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.













































