ಕುಕ್ಕೆ ಸಮಗ್ರ ಅಭಿವೃದ್ಧಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪಾತ್ರ ಅವಿಸ್ಮರಣೀಯ

Picture of Savistara

Savistara

Bureau Report

ಮಾಜಿ ಮುಖ್ಯಮಂತ್ರಿ ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ನಮ್ಮ ಕ್ಷೇತ್ರದ ಪಾಲಿಗೆ ಅವಿಸ್ಮರಣೀಯ.

🔸 ₹180 ಕೋಟಿ ಮಾಸ್ಟರ್ ಪ್ಲಾನ್: ಪ್ರಥಮ ಬಾರಿ ಮುಖ್ಯಮಂತ್ರಿಯಾಗಿದ್ದಾಗ ದೇವಾಲಯದ ಸಮಗ್ರ ಅಭಿವೃದ್ಧಿಗೆ ಸ್ವತಃ ಮುತುವರ್ಜಿ ವಹಿಸಿ ಮಂಜೂರು ಮಾಡಿದ್ದರಿಂದ, ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಯಾಗಶಾಲೆ, ಆದಿಶೇಷ ಗೆಸ್ಟ್ ಹೌಸ್, ಅನಘ ಗೆಸ್ಟ್ ಹೌಸ್, ಅಭಯ ಹಾಗೂ ಅನಂತ ಗೆಸ್ಟ್ ಹೌಸ್‌ಗಳ ನಿರ್ಮಾಣ ಮತ್ತು ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳಲು ಇವರು ಕೂಡ ಓರ್ವ ಪ್ರಮುಖ ಕಾರಣಕರ್ತರು.

🔸 ವಿಶೇಷ PWD ಕಚೇರಿ: ದೇವಾಲಯದ ಕಾಮಗಾರಿಗಳಿಗಾಗಿಯೇ ಸುಬ್ರಹ್ಮಣ್ಯದಲ್ಲಿ ಲೋಕೋಪಯೋಗಿ ಇಲಾಖೆಯ ವಿಶೇಷ ಕಚೇರಿಯನ್ನು ತೆರೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಲ್ಲದೆ ಸುಳ್ಯ ಚೆನ್ನಕೇಶವ ದೇವಸ್ಥಾನ ಒಂದು ಕೋಟಿ, ಕಾಯಾರತೋಡಿ ದೇವಸ್ಥಾನ ಅನುದಾನ ಹೀಗೆ ಅನೇಕ ದೇವಾಲಯದ ಅಭಿವೃದ್ಧಿಯಲ್ಲಿ ಯಡಿಯೂರಪ್ಪ ಪಾತ್ರ ಸ್ಮರಣಿಯ

[t4b-ticker]
error: Content is protected !!