ಬೆಂಗಳೂರು: ಈ ಬಾರಿ ಬಿಸಿಲಿನ ಪ್ರಖರತೆ ತೀವ್ರವಾಗಿರಲಿದೆ. ಚಳಿ ಪ್ರಮಾಣ ಹೆಚ್ಚಾಗಿದ್ದುದರಿಂದ ಬಿಸಿಲ ಝಳವೂ ಹೆಚ್ಚಾಗಿರಲಿದೆ ಎಂಬುದು ಹವಾಮಾನ ತಜ್ಞರ ಲೆಕ್ಕಾಚಾರವಾಗಿದೆ.
ಪ್ರಸ್ತುತ ದಟ್ಟ ಮಂಜಿನ ನಡುವೆ ಬಿಸಿಲಿನ ಝಳವೂ ಹೆಚ್ಚಾಗುತ್ತಿದೆ. ಈಗಲೇ ಬೇಸಿಗೆಯಂತಾಗಿದೆ. ಬೆಳಗ್ಗೆ 10 ರಿಂದಲೇ ಮೈ ಸುಡುವಷ್ಟು ಬಿಸಿಲು ಜನರನ್ನು ಬಾಧಿಸುತ್ತಿದೆ. ಬಿಸಿಲಿನ ಜತೆಗೆ ಧೂಳು ಹೆಚ್ಚಾಗಿದ್ದು, ವಾತಾವರಣ ಶುಷ್ಕತೆಯಿಂದ ಕೂಡಿದೆ. ಕಳೆದ ಒಂದು ವಾರದಿಂದಲೂ ಒಣಹವೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಜನವರಿ ಕೊನೆಗೆ ಚಳಿ ಅಂತ್ಯ; ಬೇಸಿಗೆ ಆರಂಭ.
ಈ ಬಾರಿ ಡಿಸೆಂಬರ್ನಲ್ಲಿ ದಾಖಲೆಯ ಪ್ರಮಾಣದಲ್ಲಿ ಚಳಿಯಿತ್ತು. ಯಾವಾಗ ಚಳಿ ಹೆಚ್ಚಾಗಿರುತ್ತದೆಯೋ ಆ ಬಾರಿ ಬೇಸಿಗೆಯ ಪ್ರಖರತೆ ಕೂಡ ಹೆಚ್ಚಾಗಿರುತ್ತದೆ. ಅಂದರೆ ವಾಡಿಕೆಗಿಂತ ಹೆಚ್ಚು ಉಷ್ಣತೆ ದಾಖಲಾಗುತ್ತದೆ. ಫೆಬ್ರವರಿಯಲ್ಲೂ ಚಳಿಯ ಪ್ರಮಾಣ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಜನವರಿ ಅಂತ್ಯದ ವೇಳೆಗೆ ಚಳಿಯ ಪ್ರಭಾವ ಕುಗ್ಗುತ್ತದೆ. ಫೆಬ್ರವರಿಯಿಂದಲೇ ಬಿಸಿಲು ಆರಂಭವಾಗುತ್ತದೆ, ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಶುಷ್ಕ ವಾತಾವರಣದಿಂದಾಗಿ ಜನರು ನಾನಾ ರೋಗಗಳಿಗೆ ಒಳಗಾಗುತ್ತಿದ್ದಾರೆ. ಸೂರ್ಯನ ಪ್ರಖರ ಕಿರಣಗಳಿಂದ ಚರ್ಮ ಸುಡುವುದು, ಚರ್ಮದ ಅಲರ್ಜಿಗಳು, ಶ್ವಾಸಕೋಶ ತೊಂದರೆ, ಉಷ್ಣದ ಕೆಮ್ಮು, ತಲೆ ಸುತ್ತು, ಅಂಗೈ-ಅಂಗಾಲು ಉರಿ, ಉರಿ ಮೂತ್ರ, ಮಲಬದ್ಧತೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಗಳಾಗಿವೆ. ಜತೆಗೆ ಬೇಸಿಗೆಯಲ್ಲಿಇವು ಹೆಚ್ಚಾಗಲಿವೆ ಎನ್ನುತ್ತಿದ್ದಾರೆ ವೈದ್ಯರು.
ಹೆಚ್ಚಿದ ಒಣಕೆಮ್ಮುಧೂಳು ಮತ್ತು ವಾತಾವರಣದಲ್ಲಿತೇವಾಂಶ ಕಡಿಮೆಯಾಗಿದೆ. ಜತೆಗೆ, ಖಾಲಿ ಪ್ರದೇಶಗಳು, ಮರ-ಗಿಡಗಳ ಎಲೆಗಳ ಮೇಲೆ ಹೆಚ್ಚು ಧೂಳು ಕೂತಿರುತ್ತದೆ. ಇದರಿಂದ ಒಣ ಕೆಮ್ಮು ಹೆಚ್ಚಾಗುತ್ತಿದೆ. ಮಲಿನ ವಾತಾವರಣದಿಂದಾಗಿ ಬಂದ ಕೆಮ್ಮು ಬೇಗ ವಾಸಿಯಾಗದೆ ಜನರನ್ನು ಹೆಚ್ಚು ಬಾಧಿಸುತ್ತಿದೆ.ಇದೇ ವೇಳೆ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿರಸ್ತೆಗಳನ್ನು ಅಗೆದು ಪೈಪ್ಲೈನ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ದೂಳಿನ ಪ್ರಮಾಣವೂ ಹೆಚ್ಚುತ್ತಿದೆ. ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಬಿಸಿಲಿನ ಝಳ ಹೆಚ್ಚಾಗಲಿದೆ. ಪ್ರತಿ ವರ್ಷ ತಾಪಮಾನ ಏರುತ್ತಲೇ ಇದೆ. ಅದೇ ಪ್ರವೃತ್ತಿ ಈ ಬಾರಿಯೂ ಮುಂದುವರಿದಿದೆ. ಹಿಂದೆಲ್ಲಾ ಫೆಬ್ರವರಿಯಲ್ಲಿ ಸರಾಸರಿ ತಾಪಮಾನ ಇರುತ್ತಿತ್ತು. ಈ ಬಾರಿ ಆ ತಾಪಮಾನದ ಪ್ರಮಾಣ 35 ಡಿಗ್ರಿ ಸೆ. ದಾಟಲಿದೆ. ಮಾರ್ಚ್ – ಏಪ್ರಿಲ್ನಲ್ಲಿ ತಾಪಮಾನ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ.












































