ರಾಮನಗರ : ಜಾಹೀರಾತುಗಳಿಂದ ಬಿಎಂಟಿಸಿ ಒಂದಕ್ಕೆ 60ಕೋಟಿ ರೂ. ಆದಾಯ ಬರುತ್ತಿದೆ. ಮೊನ್ನೆ ಗುಟ್ಕಾ ಜಾಹೀರಾತನ್ನು ಹುಬ್ಬಳ್ಳಿಯಲ್ಲಿ ಹರಿದು ಹಾಕಿದ್ದಾರೆ. ಹಾಗಾದರೆ ದೇಶದಲ್ಲಿ ಗುಟ್ಕಾವನ್ನೇ ನಿಷೇಧ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಸಾರಿಗೆ ಬಸ್ಗಳ ಮೇಲೆ ಜಾಹೀರಾತು ಅಳವಡಿಕೆ ಸಂಬಂಧ ಪ್ರತಿಕ್ರಿಯಿಸಿ, ನಾವು ಗುಟ್ಕಾ ನಿಷೇಧ ಮಾಡೋಕೆ ಹೋರಾಟ ಮಾಡಬೇಕಾ ಅಥವಾ ಬಸ್ ಮೇಲಿನ ಸ್ಟಿಕ್ಕರ್ ಬಗ್ಗೆ ಹೋರಾಟ ಮಾಡಬೇಕಾ? ಗುಟ್ಕಾ ನಿಷೇಧದ ಬಗ್ಗೆ ದೇಶವ್ಯಾಪಿ ತೀರ್ಮಾನ ತೆಗೆದುಕೊಳ್ಳಲಿ. ಈ ಬಗ್ಗೆ ನಾವು ಗಮನಹರಿಸಿದ್ದು, ಇಡೀ ಬಸ್ ಪೂರ್ತಿ ಜಾಹಿರಾತು ಹಾಕುವಂತಿಲ್ಲ. ಶೇ 40 ರಷ್ಟು ಮಾತ್ರ ಜಾಹೀರಾತು ಹಾಕುವಂತೆ ಸೂಚನೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.













































