ಇದೇ ಜನವರಿ 29 ರಂದು ನಾಮಪತ್ರ ಸಲ್ಲಿಕೆ ಮಾಡಿ ಅಂದೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಮಾಡಬೇಕಿದೆ. ಮತದಾನ ನಡೆಯುತ್ತಾ, ಅವಿರೋಧ ಆಯ್ಕೆ ಆಗುತ್ತಾ…? ಎಂಬ ಕುತೂಹಲ ಇದೆ. ಈಗ ಸಿಎಂ ಸಿದ್ದರಾಮಯ್ಯ ರಂಗಪ್ರವೇಶ ಮಾಡಿದ್ದು. ಅಪೆಕ್ಸ್ ಬ್ಯಾಂಕ್ ನೂತನ ನಿರ್ದೇಶಕರಗಳ ಜೊತೆಗೆ ಸಭೆ ನಡೆಸ್ತಿದ್ದಾರೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡಿಕೆಶಿ ಬಣದ ನಡುವೆ ಪೈಪೋಟಿ ನಡೆಯುತ್ತಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಮಾಜಿ ಸಚಿವ ಕೆಎನ್ ರಾಜಣ್ಣ ಕಣ್ಣಿಟ್ಟಿದ್ದಾರೆ. ಡಿಸಿಎ ಡಿಕೆಶಿ ಆಪ್ತ ಎಂಎಲ್ಸಿ ಎಸ್ ರವಿಯಿಂದ ಸಹ ಅಧ್ಯಕ್ಷ ಸ್ಥಾನ ಪಟ್ಟ ಪಡೆಯಲು ಪೈಪೋಟಿ ನಡೆಸ್ತಿದ್ದಾರೆ. .













































