ಮುಂಬೈ: ಬಿಎಂಸಿ ಚುನಾವಣೆಯಲ್ಲಿ ಎನ್ಡಿಎ ಮಹಾಯುತಿ ಒಕ್ಕೂಟದ ಅದ್ಭುತ ಪ್ರದರ್ಶನದ ನಂತರ ಬಿಜೆಪಿ ಅಭ್ಯರ್ಥಿ ರಿತು ತಾವ್ಡೆ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ರಿತು ತಾವ್ಡೆ ಘಾಟ್ಕೋಪರ್ನ ವಾರ್ಡ್ 132 ರಿಂದ ಕಾರ್ಪೊರೇಟರ್ ಆಗಿದ್ದು, ಈ ಸ್ಥಾನದಿಂದ ಮರು ಆಯ್ಕೆಯಾಗಿದ್ದಾರೆ. ಶಿವಸೇನೆ (ಶಿಂಧೆ ಬಣ) ನಾಯಕ ಸಂಜಯ್ ಶಂಕರ್ ಘಾಡಿ ಉಪ ಮೇಯರ್ ಹುದ್ದೆಗೆ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ಅವರು ತಮ್ಮ ನಾಮಪತ್ರವನ್ನೂ ಸಲ್ಲಿಸಿದ್ದಾರೆ.ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಪೊರೇಟ್ ರಿತು ತಾವ್ಡೆ ಭಾರತದ ಅತ್ಯಂತ ಶ್ರೀಮಂತ ನಾಗರಿಕ ಮಂಡಳಿಯಾದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನ ಮುಂದಿನ ಮೇಯರ್ ಆಗಲಿದ್ದಾರೆ.












































