ಅನಿಲ ಸ್ಥಾವರ ಸ್ಫೋಟದಲ್ಲಿ ಭಾರತೀಯರು ಸೇರಿ 13 ಮಂದಿ ದಾರುಣ ಸಾವು

Picture of Savistara

Savistara

Bureau Report

ಕತಾ‌ರ್: ಈ ವರ್ಷದ ಆರಂಭದಲ್ಲಿ ಇರಾನ್ ಕ್ಷಿಪಣಿ ದಾಳಿಯಿಂದಸ್ಥಗಿತವಾಗಿದ್ದ ರಾಸ್ ಲಫಾನ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸಂಕೀರ್ಣದಲ್ಲಿ ಕಾರ್ಯಾಚರಣೆಯನ್ನು ಕಾರ್ಮಿಕರು ಪುನರಾರಂಭಿಸುತ್ತಿದ್ದಾಗ, ರವಿವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಭಾರತೀಯರು ಸೇರಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, 66 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.ಕತಾರ್ ಅಧಿಕಾರಿಗಳು ಈ ಘಟನೆಯನ್ನು ಬರ್ಜಾನ್ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ “ತಾಂತ್ರಿಕ ಅಪಘಾತ” ಎಂದು ಬಣ್ಣಿಸಿದ್ದಾರೆ. ಇದು ದೇಶದ ಪ್ರಮುಖ ಎಲ್‌ಎನ್‌ಜಿ ಉತ್ಪಾದನೆ ಮತ್ತು ರಫ್ತು ಕೇಂದ್ರವಾದ ವಿಶಾಲವಾದ ರಾಸ್ ಲಫಾನ್ ಕೈಗಾರಿಕಾ ನಗರದ ಭಾಗವಾಗಿದೆ.ಇರಾನ್ ಯುದ್ಧದ ಸಮಯದಲ್ಲಿ ಹಾನಿಗೀಡಾದ ಸ್ಥಾವರದಲ್ಲಿ ಉತ್ಪಾದನೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳ ಮಧ್ಯೆ ಈ ಸ್ಫೋಟ ಸಂಭವಿಸಿದೆ. ಇದು ಗಲ್ಫ್ ಪ್ರದೇಶದಾದ್ಯಂತ ಇಂಧನ ರಫಿಗೆ ತೀವ್ರ ಅಡ್ಡಿಯುಂಟುಮಾಡಲಿದೆ.ಕತಾರ್‌ನ ಅಧಿಕಾರಿಗಳು ಬಲಿಪಶುಗಳ ರಾಷ್ಟ್ರೀಯತೆಗಳನ್ನು ತತ್ ಕ್ಷಣ ಬಹಿರಂಗಪಡಿಸಲಿಲ್ಲ. ಆದಾಗ್ಯೂ, ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಘ Qatar: ಅನಿಲ ಸ್ಥಾವರ ಸ್ಫೋಟದಲ್ಲಿ ಭಾರತೀಯರು ಸೇರಿ 13 ಮಂದಿ ದಾರುಣ ಸಾವುಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಹಲವಾರು ಜನರು ಗಾಯಗೊಂಡಿದ್ದಾರೆ ಮತ್ತು ಕೆಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಸ್ಫೋಟದ ಭಾರೀ ಶಬ್ದವು ಕೈಗಾರಿಕಾ ಸಂಕೀರ್ಣದಿಂದ 70 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಮಧ್ಯ ದೋಹಾದಾದ್ಯಂತ ಅನುಭವವಾಯಿತು, ಇದು ನಿವಾಸಿಗಳಲ್ಲಿ ಭೀತಿಗೆ ಕಾರಣವಾಯಿತು.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!