ಬೆಂಗಳೂರು, ಫೆ. 7: ಶೀಘ್ರವೇ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಸೇವೆ – ಪ್ರಾರಂಭಿಸುವ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ರೈಲ್ವೇ, ಐಟಿಬಿಟಿ ಹಾಗೂ ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.ಹಾಸನ-ಮಂಗಳೂರು ನಡುವಿನ ಘಾಟಿ ವಿಭಾಗದಲ್ಲಿ ವಿದ್ಯುದೀಕರಣ ಕಾರ್ಯ ಭರ ದಿಂದ ಸಾಗುತ್ತಿದ್ದು ಮುಕ್ತಾಯಗೊಂಡು ಸುರಕ್ಷಾ ಪ್ರಮಾಣ ಪತ್ರ ಸಿಗಲು ಕಾಯುತ್ತಿದ್ದೇವೆ. ಪ್ರತೀ ದಿನ 2 ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಓಡಾಡ ಲಿದೆ ಎಂದು ವಿವರಿಸಿದರು.ಬೆಂಗಳೂರು-ಮಂಗಳೂರು ವಂದೇ ಭಾರತ್ ಸಂಪರ್ಕವನ್ನು ಕಾರವಾರದ ವರೆಗೂ ವಿಸ್ತರಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಇದೇ ವೇಳೆ ವಿವರಿಸಿದರು.52,950 ಕೋ.ರೂ. ಹೂಡಿಕೆರಾಜ್ಯದ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರಕಾರ ಒಟ್ಟು 52,950 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು ಕರ್ನಾಟಕಕ್ಕೆ ಈ ವರ್ಷದ ಬಜೆಟ್ನಲ್ಲಿ 7,749 ಕೋಟಿ ರೂ. ಕೊಡುಗೆ ನೀಡ ಲಾಗಿದೆ. ಇದು ಯುಪಿಎ ಅವಧಿಯಲ್ಲಿ ದೊರೆತ ಅನುದಾನಕ್ಕಿಂತ 9 ಪಟ್ಟು ಹೆಚ್ಚು ಎಂದರು.ಬೆಂಗಳೂರು-ಮುಂಬಯಿ ಮಧ್ಯೆ ಶೀಘ್ರದಲ್ಲಿ ಪ್ರೀಮಿಯಂ ರೈಲು ಸೇವೆ ಆರಂಭಿಸುವುದಾ ಗಿಯೂ ಕೂಡ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬೆಂಗಳೂರು-ಮಂಗಳೂರು ವಂದೇ ಭಾರತ್ ಶೀಘ್ರವೇ ಸಂಚಾರ: ಸಚಿವ ಅಶ್ವಿನಿ ವೈಷ್ಣವ್
Savistara
Bureau Report
[t4b-ticker]












































