ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್‌ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ; ಯಾವೆಲ್ಲಾ ಕಾಮಗಾರಿ ಸ್ಥಗಿತ?

Picture of Savistara

Savistara

Bureau Report

ಪರಿಸರವಾದಿಗಳ ಹೋರಾಟ ಮತ್ತು ರಾಜವಂಶಸ್ಥರ ತೀವ್ರ ವಿರೋಧದ ಬಳಿಕ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳನ್ನು ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ. 2025ರಲ್ಲಿ ಆರಂಭಿಸಿದ್ದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಲ್ಟಿಪರ್ಪಸ್‌ ಏರಿಯಾ ಅಭಿವೃದ್ಧಿ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ವಾದ-ವಿವಾದ ಆಲಿಸಿದ ನ್ಯಾಯಾಲಯ, ಬೆಟ್ಟದಲ್ಲಿ ಒಂದು ಕಾಮಗಾರಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದೆ

[t4b-ticker]
error: Content is protected !!