ಅಂಗವೈಕಲ್ಯತೆಯೆ ಸವಾಲಿನ ನಡುವೆಯೂ ಸುಬ್ರಹ್ಮಣ್ಯ ದ ಬಿಲದ್ವಾರ ಬಳಿಯ ನಿವಾಸಿಯಾಗಿರುವ ಸಾಯಿ ದರ್ಶನ್ ಮನೆಯಲ್ಲಿ ಖಾಸಗಿಯಾಗಿ ಪಿ.ಯು ಪರೀಕ್ಷೆ ಬರೆದು ಉತ್ತೀರ್ಣರಾದರು.ಪದವಿ ಶಿಕ್ಷಣವನ್ನು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಕಲಿಯಬೇಕೆಂಬ ಹಂಬಲ ಹೊಂದಿದ್ದ. ಸಾಯಿದರ್ಶನ್ ಅವರ ತುಡಿತವನ್ನು ಮನಗೊಂಡು ಕಾಲೇಜಿಗೆ ಹೋಗಿಬರಲು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರು MSEZ ನ ಸಿಎಸ್ಆರ್ ನಿಧಿಯಿಂದ ಅತ್ಯಾಧುನಿಕ ನಿಯೋಬೋಲ್ಟ್ ವ್ಹೀಲ್ ಚೇರ್ ಅನ್ನು ಒದಗಿಸಿಕೊಡುವ ಮೂಲಕ ವಿದ್ಯಾರ್ಥಿ ಸಾಯಿ ಸುದರ್ಶನ್ ಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸಂಸದರ ಈ ಕಾಳಜಿಗೆ ವಿದ್ಯಾರ್ಥಿ ಸಾಯಿ ಸುದರ್ಶನ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸುಬ್ರಹ್ಮಣ್ಯ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ಸಂಸದರ ಈ ಕಾರ್ಯವನ್ನು ಶ್ಲಾಘಿಸಿದರು.
ಸುಬ್ರಹ್ಮಣ್ಯ: ಅಶಕ್ತ ಕಾಲೇಜು ವಿದ್ಯಾರ್ಥಿಯ ಬಾಳಿಗೆ ಬೆಳಕಾದ ಸಂಸದ ಕ್ಯಾ. ಚೌಟ
Savistara
Bureau Report
[t4b-ticker]













































