ಸುಳ್ಯ ಕ್ಷೇತ್ರದಲ್ಲಿ ವಿವಿಧ ಸೇತುವೆ ಕಾಮಗಾರಿಗಳಿಗೆ 5 ಕೋಟಿ ಅನುದಾನ ಬಿಡುಗಡೆ

Picture of Savistara

Savistara

Bureau Report

ಸುಳ್ಯ: ಶಾಸಕರ ಶಿಫಾರಸ್ಸಿನ ಮೇರೆಗೆ ಸುಳ್ಯ ಮತ್ತು ಕಡಬ ತಾಲ್ಲೂಕಿನ ಜಿಲ್ಲಾ ಪಂಚಾಯತ್ ಮುಖ್ಯ ರಸ್ತೆ ಮತ್ತು ಲೊಕೋಪಯೋಗಿ ರಸ್ತೆಗಳಲ್ಲಿ ಶಿಥಿಲಗೊಂಡಿರುವ 5 ಸೇತುವೆಗಳ ಅಭಿವೃದ್ಧಿಗೆ 5ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಸುಳ್ಯ ತಾಲೂಕಿನ

ನಡುಗಲ್ಲು-ಹರಿಹರ-ಪಲ್ಲತಡ್ಕ ಬಾಳುಗೋಡು ರಸ್ತೆಯ ಕಿ.ಮೀ 10.75 ರಲ್ಲಿ ಪದಕ ಎಂಬಲ್ಲಿ ಸೇತುವೆ ನಿರ್ಮಾಣಕದಕೆ 1.75 ಕೋಟಿ, ಮಡಪ್ಪಾಡಿ ಗ್ರಾಮದ ಸೇವಾಜೆ-ಮಡಪ್ಪಾಡಿ-ಕಂದ್ರಪ್ಪಾಡಿ-ಗುತ್ತಿಗಾರು ರಸ್ತೆಯ ಕಿ.ಮೀ 11.70ರ ಮೆಟ್ಟಿನಡ್ಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 1.50 ಕೋಟಿ ಮಂಡೆಕೋಲು ಗ್ರಾಮದ ಸುಳ್ಯ-ಕಾಂತಮಂಗಲ- ಅಜ್ಜಾವರ-ಮಂಡೆಕೋಲು- ಕನ್ಯಾನ ರಸ್ತೆಯ ಕಿ.ಮೀ 8.50 ರಲ್ಲಿ ತೋಟಂಪ್ಪಾಡಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 60 ಲಕ್ಷ ಸುಳ್ಯ ತಾಲೂಕು ಪುಳಿಕುಕ್ಕು-ಎಡಮಂಗಲ- ಅಲೆಕ್ಕಾಡಿ ರಸ್ತೆಯ ಕಿ.ಮೀ 2.50 ರಲ್ಲಿ ಡೆಕ್ಕಳ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ (ಹಾನಿಗೊಳಗಾದ ಕಿರಿದಾದ ಸೇತುವೆ ಬದಲಿಗೆ) 25 ಲಕ್ಷ, ಪೈಚಾರು-ಬೆಳ್ಳಾರೆ-ಸವಣೂರು-ಕುದ್ಮಾರು-ಅಲಂಕಾರು-ಸುಬ್ರಹ್ಮಣ್ಯ ರಸ್ತೆಯ ಕಿ.ಮೀ 3.50 ರಲ್ಲಿ ಸೇತುವೆ ನಿರ್ಮಾಣಕ್ಕೆ 90 ಲಕ್ಷ ಬಿಡುಗಡೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!