ಶೀಘ್ರದಲ್ಲೇ ಪಂಚಾಯಿತಿ ಫೈಟ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ |

Picture of Savistara

Savistara

Bureau Report

ಬೆಂಗಳೂರು: ಬಹುಕಾಲದಿಂದ ಜನಪ್ರತಿನಿಧಿಗಳಿಲ್ಲದೆನಿಸ್ತೇಜಗೊಂಡಿರುವ ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಸುವ ಇಂಗಿತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದಾರೆ.’ವಿಕ’ ಕಚೇರಿಯಲ್ಲಿಮಂಗಳವಾರ ಸಂವಾದದಲ್ಲಿ ಪಾಲ್ಗೊಂಡ ಅವರು, ”ಮೀಸಲು ಅಂತಿಮಗೊಳಿಸಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಾಗಿದ್ದು, ಕೋರ್ಟ್ ತಕರಾರು ಬಗೆಹರಿದಿದೆ. ಸರಕಾರ ಶೀಘ್ರದಲ್ಲೇ ಚುನಾವಣೆ ನಡೆಸಲಿದೆ,” ಎಂದು ತಿಳಿಸಿದರು.”ಅಧಿಕಾರ ವಿಕೇಂದ್ರೀಕರಣದ ಆಶಯದಂತೆ ಸ್ಥಳೀಯ ಆಡಳಿತವನ್ನು ಬಲಪಡಿಸುವುದು ಚುನಾಯಿತ ಸರಕಾರದ

ಜವಾಬ್ದಾರಿ. ಈಗಲೂ ಚುನಾವಣೆ ನಡೆಸದಿದ್ದರೆ ಅಸಂವಿಧಾನಿಕ ಆಗಲಿದೆ ಎಂಬುದು ನನ್ನ ವೈಯಕ್ತಿಕ ಹಾಗೂ ಸರಕಾರದ ನಿಲುವು.” ಎಂದು ಹೇಳಿದರು.’ಚುನಾವಣೆ ನಡೆಸಲು ಬೇಸಿಗೆಯಲ್ಲಿ ತಾಪಮಾನ ಹೆಚ್ಚು ಎನ್ನುತ್ತಾರೆ, ಮಳೆಗಾಲದಲ್ಲಿ ವಿಶೇಷವಾಗಿ ಕರಾವಳಿ ಭಾಗದ ಜನ ಮತದಾನ ಕಷ್ಟ ಎನ್ನುತ್ತಾರೆ. ಸಮಸ್ಯೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಚುನಾವಣೆಗಳು ಬೇಸಿಗೆಯಲ್ಲೇ ನಡೆಯುತ್ತವೆ. ಹಾಗಾಗಿ, ಇಂತಹ ಸಮಸ್ಯೆ ಮತ್ತು ಕಾರಣಗಳನ್ನು ಮುಂದಿಟ್ಟು ಚುನಾವಣೆಯನ್ನು ಮತ್ತಷ್ಟು ಮುಂದೂಡಲಾಗದು. ಎರಡು ತಿಂಗಳಲ್ಲೇ ಚುನಾವಣೆ ಪ್ರಕ್ರಿಯೆ ನಡೆಸುವ ಉದ್ದೇಶವಿದೆ,” ಎಂದು ಸ್ಪಷ್ಟಪಡಿಸಿದರು.

[t4b-ticker]
error: Content is protected !!