ಶ್ರೀ ಕ್ಷೇತ್ರ ಮಧೂರು ಬ್ರಹ್ಮ ಕಲಶ ಸಂಪನ್ನಗೊಂಡ ಬೆನ್ನಲ್ಲೇ ಧಾರಾಕಾರ ವರ್ಷಧಾರೆ; ಜಲಾವೃತಗೊಂಡ ದೇವಾಲಯ

Picture of Savistara

Savistara

Bureau Report

ಪ್ರಸಿದ್ಧ ಯಾತ್ರಾಸ್ಥಳವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಏಪ್ರಿಲ್ 27ರಿಂದ ವಿಜೃಂಭಣೆಯಿಂದ ಜರುಗುತ್ತಿದ್ದ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ಏಪ್ರಿಲ್ 4 ರಂದು ಯಶಸ್ವಿಯಾಗಿ ಸಂಪನ್ನಗೊಂಡಿವೆ. ಇದರ ಅಂಗವಾಗಿ ಇಂದು, ಏಪ್ರಿಲ್ 5 ರಂದು. ಐತಿಹಾಸಿಕ ‘ಮೂಡಪ್ಪ ಸೇವೆ’ ಜರುಗಲಿದೆ.

ಮಂಗಳೂರು ಕಾಸರಗೋಡು: ಪ್ರಸಿದ್ಧ ಯಾತ್ರಾಸ್ಥಳವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಏಪ್ರಿಲ್ 27ರಿಂದ ವಿಜೃಂಭಣೆಯಿಂದ ಜರುಗುತ್ತಿದ್ದ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ಏಪ್ರಿಲ್ 1 ರಂದು ಯಶಸ್ವಿಯಾಗಿ ಸಂಪನ್ನಗೊಂಡಿವೆ. ಇದರ ಅಂಗವಾಗಿ ಇಂದು, ಏಪ್ರಿಲ್ 5 ರಂದು, ಐತಿಹಾಸಿಕ ‘ಮೂಡಪ್ಪ ಸೇವೆ’ ಜರುಗಲಿದೆ.

ಆದಾಗ್ಯೂ, ಏಪ್ರಿಲ್ 1 ರಂದು ಬ್ರಹ್ಮಕಲಶದ ಪ್ರಮುಖ ವಿಧಿಗಳು ಪೂರ್ಣಗೊಂಡ ನಂತರ ಮಧೂರು ಕ್ಷೇತ್ರದಲ್ಲಿ ಸುರಿದ ಮಹಾಮಳೆಯು ದೇವಸ್ಥಾನದ ಆವರಣದಲ್ಲಿ ಕೆಲ ಅಸ್ತವ್ಯಸ್ತತೆಗೆ ಕಾರಣವಾಯಿತು. ಧಾರಾಕಾರ ವರ್ಷಧಾರೆಯಿಂದಾಗಿ ಸಭಾಂಗಣ, ಉಗ್ರಾಣ.ಅನ್ನಸಂತರ್ಪಣೆ ನಡೆಯುವ ಚಪ್ಪರ ಹಾಗೂ ವಾಹನ ನಿಲುಗಡೆ ಪ್ರದೇಶಗಳು ಜಲಾವೃತಗೊಂಡವು.

[t4b-ticker]
error: Content is protected !!