ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸುಳ್ಯ ದಲ್ಲಿ ನಡೆದ ಕಾಪಿಕೊ ಕಾರ್ಯಕ್ರಮದ ನಂತರ ಸುಳ್ಯ ನಗರ ಪಂಚಾಯತ್ ವಠಾರದ ಶೆಡ್ ನಲ್ಲಿ ಸಂಗ್ರಹಗೊಂಡಿರುವ ಕಸದ ರಾಶಿಯನ್ನು ವೀಕ್ಷಿಸಿದರು. ನಂತರ ನ.ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳಿಂದ ಮಾಹಿತಿ ಕೇಳಿದರು.ಶೆಡ್ನಲ್ಲಿ ವಿವಿಧ ಕಾರಣಗಳಿಂದ ತುಂಬಿದ್ದ ಕಸವನ್ನು ಇದೀಗ ತೆರವು ಮಾಡಿ ಸಾಗಾಟ ಮಾಡಲಾಗುತ್ತಿದ್ದು, ಕಸ ಖಾಲಿಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆದಷ್ಟು ಬೇಗ ಶೆಡ್ನ ಪೂರ್ತಿ ಕಸ ಖಾಲಿಯಾಗಲಿದೆ ಎಂದರು. ಶೀಘ್ರ ತೆರವಿಗೆ ಸಲಹೆ, ಸೂಚನೆಗಳನ್ನು ಸಂಸದರು ನೀಡಿದರು.ಕಸ ಸಾಗಾಟಕ್ಕೆ ಅನುದಾನ ಒದಗಿಸಲು ಪ್ರಯತ್ನ ನಡೆಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ.

ತಹಶೀಲ್ದಾರ್ ಮಂಜುಳಾ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್, ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನಗರ ಪಂಚಾಯತ್ ಸದಸ್ಯರು, ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮೊದಲಾದವರು ಉಪಸ್ಥಿತರಿದ್ದರು.











































