ಸುಳ್ಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಣ್ಣು ಮುಚ್ಚಾಳೆ ಆಟ |ಹೇಳೋವರಿಲ್ಲ ಕೇಳೋವರಿಲ್ಲ ಮುಗಿಯದ ಕಥೆ

Picture of Savistara

Savistara

Bureau Report

ಸುಳ್ಯ: ಸುಳ್ಯ ತಾಲೂಕಿನಲ್ಲಿ ನಿರಂತರವಾಗಿ ಕಳೆದ 3,4 ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದೂ ನಗರ ಮತ್ತು ಗ್ರಾಮೀಣ ಪ್ರದೇಶ ಆನೇಕ ಕಡೆ ವಿದ್ಯುತ್ ವ್ಯತ್ಯಯವಾಗಿದೆ, ಪ್ರತೀ ಮಳೆಗಾಲ ಬಂತೆಂದರೆ ಸಾಕು ಸಮಸ್ಯೆ ಎದುರಿಸುತ್ತಿದ್ದೂ ಆನೇಕ ಕಡೆ ಮರದ ಗೆಲ್ಲು ತೆರವು ಮಾಡದಿರುವುದು ಮುಖ್ಯ ಕಾರಣವಾಗಿದೆ ಹೆಚ್ ಟಿ ಲೈನ್ ಅಪಾಯಕಾರಿ ಮರ ದ ಕೆಳಗಡೆ ಹಾದು ಹೋಗಿದ್ದು ತೆರವುಗೊಳಿಸದ್ದಿರುವುದರಿಂದ ಮರಗಳು ಬಿದ್ದು ಕಂಬ ಮುರಿದು ಬಿದ್ದ ಘಟನೆ ನಡೆದಿವೆ ಈ ಬಗ್ಗೆ ಇಲಾಖೆ ಗಳ ನಡುವೆ ಸಂಹನ ಕೊರತೆ ಯಿದೆ ಅದಲ್ಲದೆ ರಾಜಕೀಯ ಪಕ್ಷಗಳ ಇಚ್ಚಾಶಕ್ತಿ ಕೊರತೆ ಯಿಂದ ಸುಳ್ಯದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ ಬೇಸಿಗೆ ಕಾಲದಲ್ಲೂ ಪವರ್ ಕಟ್ ಸಮಸ್ಯೆ ಇದರಿಂದಾಗಿ ಆನೇಕ ಉದ್ದಿಮೆದಾರರು ಸುಳ್ಯದಲ್ಲಿ ವ್ಯವಹಾರ ಮಾಡಲು ಹಿಂದೇ ಸರಿದ ಉದಾಹರಣೆ ಯಿದೆ.ಅಧಿಕಾರಿಗಳ ಮಟ್ಟದಲ್ಲೂ ಈ ಸಮಸ್ಯೆ ಬಗ್ಗೆ ರಿವ್ಯೂವು ಸಭೆಗಳು ನಡೆಯದಿರುವುದು ಸಮಸ್ಯೆ ಹಾಗೇನೇ ಉಳಿದಿದೆ, ಈ ಬಗ್ಗೆ ಆಡಳಿತ ಪಕ್ಷ ಮತ್ತು ಪ್ರತಿಭಟಿಸಬೇಕಾದ ಪ್ರತಿಪಕ್ಷಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

[t4b-ticker]
error: Content is protected !!