ಪುರುಷರಕಟ್ಟೆ ಪ್ರಕರಣ: ಯುವತಿ ಮನೆಯವರಿಗೆ ಧೈರ್ಯ ತುಂಬಿದ ಪುತ್ತೂರು ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು

Picture of Savistara

Savistara

Bureau Report

ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಯುವತಿಯ ಮನೆಗೆ ಗೌಡ ಸಮುದಾಯದ ಪ್ರಮುಖರು ಭೇ ಟಿ ನೀಡಿ, ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.

ಶಾಂತಿಗೋಡು ಗ್ರಾಮದ ಆನಡ್ಕ ವಾಲ್ತಾಜೆ ಶಾಂತಪ್ಪಗೌಡ ಅವರ ಮನೆಯವರಿಗೆ ಸಮಾಜದ ಪ್ರಮುಖರು ಧೈರ್ಯ ತುಂಬಿದರು.

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಯತೀಶ್ ಆರ್ವಾರ್, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಕಾರ್ಯದರ್ಶಿಗಳಾದ ವಾರಿಜಾ ಬೆಳ್ಳಿಯಪ್ಪ ಗೌಡ, ಮೋಹನ ಬಾಳುಗೋಡು, ಯತೀಶ್ ದೇವ, ಮುಂಡೂರು ವಲಯ ಉಸ್ತುವಾರಿ ಭಾರತಿ ಕಾಡಮನೆ, ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ ಶಶಿಧ‌ರ್ ದರ್ಬೆ, ಕಾರ್ಯದರ್ಶಿಗಳಾದ ಲೇಖ ಗೋವರ್ಧನ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಯಶೋಧ ಕೆ. ಗೌಡ, ನಿಕಟ ಪೂರ್ವ ಕೋಶಾಧಿಕಾರಿ ಶಿವರಾಮ ಮತಾವು, CCP ಸಂಯೋಜಕರಾದ ಪ್ರಸನ್ನ ಕುಮಾ‌ರ್ ಡಿ.ಆರ್., ಮುಂಡೂರು ವಲಯದ ಯುವ ಘಟಕದ ಅಧ್ಯಕ್ಷ ಚಿದಾನಂದ ಸೇರಾಜೆ, ಶಾಂತಿಗೋಡು ಗ್ರಾಮದ ಊರ ಗೌಡರಾದ ದೇವಪ್ಪ ಗೌಡ, ಬಾಳಪ್ಪ ಕೆಟ್ಕಾ‌ರ್ ಮೊದಲಾದವರು ಉಪಸ್ಥಿತರಿದ್ದರು.

[t4b-ticker]
error: Content is protected !!