ಮಡಿಕೇರಿ ದಸರೆ: ಗುಂಪು ಚದುರಿಸುವಾಗ ಡಿವೈಎಸ್ಪಿ ಕಾನ್‌ಸ್ಟೆಬಲ್ ಮೇಲೆ ಹಲ್ಲೆ

Picture of Savistara

Savistara

Bureau Report

ಮಡಿಕೇರಿ: ಇಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ದಸರಾ ದಶಮಂಟಪಗಳ ಶೋಭಾಯಾತ್ರೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ವೇದಿಕೆ ಏರಿದ ಕೆಲವರು ಫೋಷಣೆಗಳು ಕೂಗಿದರು. ಈ ವೇಳೆ ಗುಂಪನ್ನು ಚೆದುರಿಸುವಾಗ ಕಿಡಿಗೇಡಿಗಳು ಡಿವೈಎಸ್ಪಿ ಸೂರಜ ಹಾಗೂ ಹೆಡ್‌ಾನ್‌ಸ್ಟೆಬಲ್ ಉದಯ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ ಆರಂಭವಾದ ಶೋಭಾಯಾತ್ರೆ ಬೆಳಿಗ್ಗೆಯವರೆಗೂ ನಡೆಯಿತು. ಗಾಂಧಿ ಮೈದಾನದಲ್ಲಿ ಮಂಟಪಗಳಿಗೆ ಬಹುಮಾನ ಘೋಷಣೆ ಮಾಡಿದಾಗ ಕೆಲವರು ‘ಮೋಸ ಮೋಸ’ ಎಂದು ಘೋಷಣೆ ಕೂಗಿ ವೇದಿಕೆ ಏರಿ ಪೀಠೋಪಕರಣಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

[t4b-ticker]
error: Content is protected !!