ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ರವರನ್ನು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಅ.3 ರಂದು ಭೇಟಿಯಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವಾರು ರಸ್ತೆ ಮೂಲಸೌಕರ್ಯ ಯೋಜನೆಗಳ ಕುರಿತು ಚರ್ಚಿಸಿದರು.ಶಿರಾಡಿ ಘಾಟ್ ಮೂಲಕ ರಸ್ತೆ ಮತ್ತು ರೈಲು ಅಭಿವೃದ್ಧಿಗಾಗಿ ಸಮಗ್ರ ಡಿಪಿಆರ್ ತಯಾರಿಕೆಯ ಅಗತ್ಯತೆಯ ನಮ್ಮ ಮನವಿಯನ್ನು ಪರಿಗಣಿಸಲಾಗಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೈಸ್ಪೀಡ್ ಸಂಪರ್ಕವನ್ನು ಸಾಧಿಸಲು ಸಚಿವಾಲಯವು ರೈಲ್ವೆ ಇಲಾಖೆಯೊಂದಿಗೆ ಜಂಟಿಯಾಗಿ ಕೆಲಸ ಮಾಡಲಿದೆ.ಪೋರ್ಟ್ ಸಂಪರ್ಕ ರಸ್ತೆಯ ಬಗ್ಗೆಯೂ ಚರ್ಚೆ ನಡೆಸಿ, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಗೆ ಹಸ್ತಾಂತರಿಸುವ ಪ್ರಾಮುಖ್ಯತೆ ಮತ್ತು ಇದನ್ನು ಮೇಲ್ದರ್ಜೆಗೇರಿಸುವ ಅಗತ್ಯತೆಯ ಬಗ್ಗೆ ಅವರ ಗಮನ ಸೆಳೆದರು.ಮಾಣಿ-ಸಂಪಾಜೆ ಚತುಷ್ಪಥ ಯೋಜನೆಯನ್ನು ಸಚಿವಾಲಯದ ವಾರ್ಷಿಕ ಯೋಜನೆ (Annual Plan) ನ ಭಾಗವಾಗಿಸಬೇಕು ಮತ್ತು ಅದನ್ನು ಮಂಜೂರು ಮಾಡಲು ಅಗತ್ಯವಾದ ಅನುಮೋದನೆಗಳನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ವಿನಂತಿಸಿದರು.
ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ರವರನ್ನು ಭೇಟಿಯಾದ ದ.ಕ ಸಂಸದ | ರಸ್ತೆ ಮೂಲಸೌಕರ್ಯ ಯೋಜನೆಗಳ ಕುರಿತು ಚರ್ಚಿಸಿದ ಕ್ಯಾ.ಬ್ರಿಜೇಶ್ ಚೌಟ
Savistara
Bureau Report
[t4b-ticker]










































