ಸಾಗರ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧ ರೈತರ ಆಕ್ರೋಶ

Picture of Savistara

Savistara

Bureau Report

ಸಾಗರದಲ್ಲಿ ನಡೆಯುತ್ತಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯ ವಿರುದ್ಧದ ರೈತ ಸಂಘದ ಹೋರಾಟಕ್ಕೆ ಸಂಸದ ಬಿ ವೈ ರಾಘವೇಂದ್ರ ಬೆಂಬಲ ವ್ಯಕ್ತಪಡಿಸಿದರು.

ಈ ಯೋಜನೆಯು ಪಶ್ಚಿಮ ಘಟ್ಟಗಳಿಗೆ ಗಣನೀಯ ಪರಿಸರ ಹಾನಿ ಉಂಟುಮಾಡುವ ಮತ್ತು ಆ ಭಾಗದ ವಿಶಿಷ್ಟ ಜೀವವೈವಿಧ್ಯದ ನಷ್ಟ ಹಾಗೂ ಪ್ರಮುಖ ಆವಾಸಸ್ಥಾನಗಳ ವಿಘಟನೆಗೆ ಕಾರಣವಾಗುವ ಕುರಿತು ಆತಂಕಗಳನ್ನು ಹೆಚ್ಚಿಸಿದೆ.

ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದು ಸಹಜ. ಕೇಂದ್ರ ಸರ್ಕಾರ ಬೇರೆ ಬೇರೆ ವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡುತ್ತ ಬರುತ್ತಿದ್ದರೂ ಶರಾವತಿ ಪಂಪ್‌ ಸ್ಟೋರೇಜ್ ನಿಂದ

ಪರಿಸರ, ಜೀವವೈವಿಧ್ಯಕ್ಕೆ ಹಾನಿಯಾಗುತ್ತಿರುವುದರ ಬಗ್ಗೆ ಕೇಂದ್ರದ ಸಂಬಂಧಪಟ್ಟ ಸಚಿವರು, ಇಲಾಖೆ ಜತೆ ಚರ್ಚಿಸುತ್ತೇನೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

[t4b-ticker]
error: Content is protected !!