ಸುಳ್ಯ:2024 ಮತ್ತು 25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಇನ್ನೂ ಬಿಡುಗಡೆಯಾಗದೆ ಕೃಷಿಕರು ಸಂಕಷ್ಟದಲ್ಲಿದ್ದಾರೆ ಅಡಿಕೆಗೆ ವ್ಯಾಪಕವಾಗಿ ಎಲೆ ಚುಕ್ಕಿ, ಕೊಳೆರೋಗ ಮತ್ತಿತರ ಕಾರಣದಿಂದ ಫಸಲು ನಷ್ಟವಾಗಿದ್ದೂ ಈ ಸಂದರ್ಭದಲ್ಲಿ ಬೆಳೆ ವಿಮೆ ಕೂಡ ಪಾವತಿಯಾಗದೆ ಕೃಷಿಕ ಬದುಕು ದುಸ್ತಾರವಾಗಿದೆ ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣ ವಿಮೆ ಹಣ ಬಿಡುಗಡೆಗೊಳಿಸುವಂತೆ ಭಾರತೀಯ ಕಿಸಾನ್ ಸಂಘ ಸುಳ್ಯ ಮತ್ತು ಕೃಷಿಕ ಸಮಾಜ ವತಿಯಿಂದ ತಹಿಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಿಸಾನ್ ಸಂಘ ಸುಳ್ಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ,ಕೃಷಿಕ ಸಮಾಜ ಅಧ್ಯಕ್ಷ ಎ.ಟಿ ಕುಸುಮಾಧರ, ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್, ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಅವಿನಾಶ್ ಕುರುಂಜಿ, ಹೇಮಂತ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು
ಕೃಷಿಕರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ವಿಳಂಬ | ವಿಮೆ ಮೊತ್ತ ತಕ್ಷಣ ಬಿಡುಗಡೆಗೊಳಿಸುವಂತೆ ತಹಿಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಸುಳ್ಯ ಕಿಸಾನ್ ಸಂಘ, ಕೃಷಿಕ ಸಮಾಜ ಮನವಿ
Savistara
Bureau Report
[t4b-ticker]













































