ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ಹಾಲಿ ಹೆಚ್ಚುವರಿಅಡ್ವಕೇಟ್ ಜನರಲ್ಗಳಾದ (ಎಎಜಿ) ಸಿ.ಎಸ್.ಪ್ರದೀಪ್, ಸಂತೋಷ್ ಎಸ್.ಗೋಗಿ ಮತ್ತು ಎನ್.ದೇವದಾಸ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಈ ತೆರವಾದ ಹುದ್ದೆಗಳಿಗೆ ಕ್ರಮವಾಗಿ ಹೈಕೋರ್ಟ್ ವಕೀಲರಾದ ಪ್ರದೀಪ್ ಗಾಂವಕರ್, ತಾರನಾಥ ಪೂಜಾರಿ ಮತ್ತು ಕೆ.ಶ್ರೀಕಾಂತ ಪಾಟೀಲ ಅವರನ್ನು ನೇಮಕ ಮಾಡಿ ಕಾನೂನು ಇಲಾಖೆ ಆದೇಶಿಸಿದೆ.













































