ಸುಬ್ರಮಣ್ಯ ಅಕ್ರಮ ಮರಳುಗಾರಿಕೆ ವಾಹನ ಪೊಲೀಸ್ ವಶ | ಸ್ಥಳೀಯ ಕಾಂಗ್ರೆಸ್ ಮುಖಂಡರ ಭಾಗಿಯಾಗಿರುವ ಶಂಕೆ?

Picture of Savistara

Savistara

Bureau Report

ಐನೆಕಿದು ಗ್ರಾಮದ ಕುಜಂಬಾರು ಎಂಬಲ್ಲಿ ಕಲ್ಲಾಜೆ ಹೊಳೆಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಲ್ಲಿಗೆ ಪೋಲಿಸರು ದಾಳಿ ಮಾಡಿ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ವಾಹನ ವಶ ಪಡಿಸಿಕೊಂಡಿರುವ ಘಟನೆ ಫೆ.16 ರಂದು ವರದಿಯಾಗಿದೆ.

ಹಿಟಾಚಿ ಯಂತ್ರದ ಮೂಲಕ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೆಂದು ಆರೋಪಿಸಲಾಗಿದ್ದು ಸುಬ್ರಹ್ಮಣ್ಯ ಠಾಣಾ ಅಧಿಕಾರಿ ಆಂಜನೇಯ ರೆಡ್ಡಿ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದ್ದು ಒಂದು ಹಿಟಾಚಿ, ಮರಳುಗಾರಿಕೆಗೆ ಬಳಸಲಾದ ಟಿಪ್ಪರ್ ಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಐನೆಕಿದು ಗ್ರಾಮದ ಕುಜಂಬಾರು ಬಳಿ ಕಲ್ಲಾಜೆ ಹೊಳೆಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ವೇಳೆ ಪೋಲಿಸರು ದಾಳಿ ಮಾಡಿ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ವಾಹನ ವಶ ವಶಪಡಿಸಿಕೊಂಡಿದ್ದು ಹಿಟಾಚಿ ಯಂತ್ರದ ಮೂಲಕ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೆಂದು ಸುಬ್ರಹ್ಮಣ್ಯ ಠಾಣಾ ಅಧಿಕಾರಿ ಆಂಜನೇಯ ರೆಡ್ಡಿ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದ್ದು ಒಂದು ಹಿಟಾಚಿ, ಮರಳುಗಾರಿಕೆಗೆ ಬಳಸಲಾದ ಟಿಪ್ಪರ್ ಗಳನ್ನು ವಶಪಡಿಸಿಕೊಂಡಿದ್ದು ಸ್ಥಳೀಯ ಸುಬ್ರಮಣ್ಯ ಕಾಂಗ್ರೆಸ್ ಮುಖಂಡ,ಕುಕ್ಕೆ ದೇವಾಲಯ ಜವಾಬ್ದಾರಿ ಯುತ ಸ್ಥಾನದಲ್ಲಿರುವ ವ್ಯಕ್ತಿಯ ಹೆಸರು ಈ ಅಕ್ರಮ ಮರಳುಗಾರಿಕೆ ಯಲ್ಲಿ ಹೆಸರು ಕೇಳಿ ಬರುತ್ತಿದೆ

ಈ ಬಗ್ಗೆ ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ.

[t4b-ticker]
error: Content is protected !!