ಸುಳ್ಯ ತಾಲೂಕಿನ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯ ಆಲೆಟ್ಟಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲೆಗೆ ಶಾಸಕರ ವಿಶೇಷ ಅನುದಾನ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಫೆ. 17 ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಸುಳ್ಯ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳ ಕೊರತೆ ಕಾರಣವಾಗುತ್ತಿದೆ. ಹಾಗೂ ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಮುನ್ನೇರಿಸಲು ಸರಕಾರದ ವಿಶೇಷ ಅನುದಾನದಲ್ಲಿ ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಗೆ 2 ಕೋಟಿ ರೂ. ವೆಚ್ಚದಲ್ಲಿ ಶಾಲೆಯು ನಿರ್ಮಾಣವಾಗಲಿದೆ. ಸುಸಜ್ಜಿತ ಕಟ್ಟಡವು ಮುಂದಿನ ದಿನಗಳಲ್ಲಿ ಕೆಲಸ ಕಾರ್ಯಗಳು ಆರಂಭಿಸಿ ಅತೀ ಶೀಘ್ರದಲ್ಲೇ ಶಾಲೆಯ ಲೋಕಾರ್ಪಣೆ ನಡೆಯಲಿದೆ. ಹಾಗೂ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಮುಂದಿನ ದಿನಗಳಲ್ಲಿ ಸಾಧನೆಯನ್ನು ಮಾಡಿ ಸುಳ್ಯ ತಾಲೂಕು ಹಾಗೂ ಶಾಲೆಗೆ ಹೆಸರು ತಂದು ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಜಯಪ್ರಕಾಶ್ ಕುಂಚಡ್ಕ, ಸುಧಾಕರ ಆಲೆಟ್ಟಿ, ನಾಗರಾಜ ಬಡ್ಡಡ್ಕ, ಸತೀಶ್ ಕುಂಬಕೋಡು, ಉದಯಕುಮಾರ್, ಸತೀಶ್, ಸುನಿಲ್ ಗುಂಡ್ಯ, ತೀರ್ಥ ಕುಮಾರ್ ಕುಂಚಡ್ಕ, ವೀಣಾ ವಸಂತ, ಶಿವಾನಂದ ರಂಗತ್ತಮಲೆ, ನಿತ್ಯಾನಂದ ಗುಂಡ್ಯ, ತೇಜಕುಮಾರ್ ಕುಡೆಕಲ್ಲು, ಕಮಲ ನಾಗಪಟ್ಟಣ, ಪ್ರೌಢಶಾಲಾ ಮುಖ್ಯಗುರು ವಿಜಯಲಕ್ಷ್ಮೀ ಆಶ್ರಮ ಶಾಲಾ ಮುಖ್ಯಗುರು ಕಾವ್ಯ, ಶಿಕ್ಷಕರಾದ ಗೀತಾ, ಹೇಮಲತಾ, ಅನಿತಾ, ಲತಾ, ಅಕ್ಷತಾ, ಅಂಗನವಾಡಿ ಕಾರ್ಯಕರ್ತೆ ಮಮತಾ, ಶಾಲಾ ವಿದ್ಯಾರ್ಥಿಗಳು, ಮೊದಲಾದವರು ಉಪಸ್ಥಿತರಿದ್ದರು.













































