ಅಂಬಲಪ್ಪುಜ :2021 ರಲ್ಲಿ ಪಿಎಫ್ಐ ಗೂಂಡಾಗಳಿಂದ ತಮ್ಮ ಕುಟುಂಬದ ಮುಂದೆಯೇ ಕ್ರೂರವಾಗಿ ಹತ್ಯೆಗೀಡಾದ ಹುತಾತ್ಮ ಶ್ರೀ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ಕೇಂದ್ರ ಸಚಿವೆ, ಕೇರಳ ಚುನಾವಣಾ ಉಸ್ತುವಾರಿ ಶೋಭಾ ಕರಂದ್ಲಾಜೆ ಹಾಗೂ ಅಂಬಲಪ್ಪುಜ ಭಾಜಪ ಅಭ್ಯರ್ಥಿ ಶ್ರೀ ಅರುಣ್ ಅನಿರುದ್ಧನ್ ಭೇಟಿ ನೀಡಿದರು.
ಶ್ರೀ ಅರುಣ್ ಅನಿರುದ್ಧನ್ ಅವರು ಇಂದು ನಾಮಪತ್ರ ಸಲ್ಲಿಸಿದ ನಂತರ ಹುತಾತ್ಮ ಶ್ರೀ ರಂಜಿತ್ ಶ್ರೀನಿವಾಸನ್ ಅವರ ತಾಯಿಯ ಆಶೀರ್ವಾದ ಪಡೆದರು.

ಈ ಬಾರಿಯ ಚುನಾವಣೆಯಲ್ಲಿ ಎಲ್ಡಿಎಫ್/ಯುಡಿಎಫ್ ಬೆಂಬಲಿತ ಗೂಂಡಾಗಳ ಭಯ ಮತ್ತು ವಿಭಜಕ ರಾಜಕೀಯವನ್ನು ಕೇರಳದ ಜನತೆ ತಿರಸ್ಕರಿಸುತ್ತಾರೆಂಬ ಭರವಸೆಯಿದೆಯೆಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ













































