ಪೆರ್ಲ: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಎನ್ಡಿಎ ಅಭ್ಯರ್ಥಿಕೆ.ಸುರೇಂದ್ರನ್ ಗುರುವಾರ ಬೆಳಗ್ಗೆ ಸಾಯಿಗ್ರಾಮ, ಬೇಂಗಪದವು, ಕುರೆಡ್ಕ, ಪೆರ್ಲ ಪೇಟೆ, ಶಿವಗಿರಿ ಸಹಿತ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, ಮಧ್ಯಾಹ್ನ ಪೆರ್ಲ ನಾಲಂದ ಕಾಲೇಜು ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು. ಬಾಕಿಲಪದವಿನಲ್ಲಿ ಕುಟುಂಬ ಸಭೆ ಹಾಗೂ ಬಜಕೂಡ್ಲುವಿನಲ್ಲಿ ಸಮುದಾಯ ಸಭೆಯಲ್ಲಿ ಭಾಗವಹಿಸಿದರು. ಬೆಳಗ್ಗೆ ಅವರು ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದರು.
ಕೆ.ಸುರೇಂದ್ರನ್ ಎಣ್ಮಕಜೆ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ
Savistara
Bureau Report
[t4b-ticker]













































