ಸುಳ್ಯ ಮುಖ್ಯ ಪೇಟೆಯಲ್ಲಿ ಒಳಚರಂಡಿ ಸ್ಲಾಬ್ ಅವ್ಯವಸ್ಥೆ | ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಗೊಳ್ಳುವುದೇ ಆಡಳಿತ?!

Picture of Savistara

Savistara

Bureau Report

ಸುಳ್ಯ:ಸುಳ್ಯ ಪೇಟೆಯ ಇಕ್ಕೆಲಗಳಲ್ಲಿ ಒಳಚರಂಡಿ ಸ್ಲಾಬ್ ಅಳವಡಿಸಿ ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಆದರೆ ಈ ಸ್ಲಾಬ್ ಅವ್ಯವಸ್ಥೆಯಿಂದ ಕೂಡಿದ್ದು ಅನೇಕ ಮಂದಿ ಪಾದಚಾರಿಗಳು ಬಿದ್ದು ಗಾಯ ಮಾಡಿಕೊಂಡಿದ್ದು ದಿನನಿತ್ಯ ಶಾಲಾ ಪುಟಾಣಿ ಮಕ್ಕಳು, ಸಾರ್ವಜನಿಕರು ಸಂಚಾರಿಸುತ್ತಿರುತ್ತಾರೆ ಇದೀಗ ಸುಳ್ಯದ ಹಳೇ ಬಸ್ ನಿಲ್ದಾಣ ಎದುರುಗಡೆ ಪ್ರಭು ಅಂಗಡಿಯವರ ಸಮೀಪ ಸ್ಲಾಬ್ ಮುರಿದು ಬಿದ್ದಿದ್ದು ಬಾಯಿ ತೆರೆದುಕೊಂಡು ಅಪಾಯ ಆಹ್ವಾನಿಸುತ್ತಿದೆ ದಿನನಿತ್ಯ ಇಲ್ಲಿ ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ ತಕ್ಷಣ ಸ್ಲಾಬ್ ಸರಿಪಡಿಸಿ ಮುಂದಕ್ಕೆ ಬರುವ ಅನಾಹುತ ತಪ್ಪಿಸುವಂತೆ ಆಡಳಿತಶಾಹಿ ಮತ್ತು ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ

[t4b-ticker]
error: Content is protected !!