ಬೆಂಗಳೂರು: ಮೇ 2 ರಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜನರ ಮೊಬೈಲ್ಗೆ ಜೋರಾದ ಸೈರನ್ ಶಬ್ದ ಅಥವಾ ತುರ್ತು ಎಚ್ಚರಿಕೆ ಸಂದೇಶಗಳು ಬರಲಿದ್ದು, ಇದರಿಂದ ಜನರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.ದೇಶಾದ್ಯಂತ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿ ಯಾಗಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಧಿಕಾರವು ತುರ್ತು ಎಚ್ಚರಿಕೆ ವ್ಯವಸ್ಥೆ ಯನ್ನು ಪರೀಕ್ಷೆಗೆ ಒಳಪಡಿಸಲಿದೆ. ಇದರ ಭಾಗವಾಗಿ ತುರ್ತು ಸಂದೇಶಗಳು ಬರಲಿವೆ. ಈಗಾಗಲೇ ಕಳೆದ 2 ದಿನಗಳಿಂದ ಪ್ರಾಧಿಕಾರವು ಇಂತಹ ಸಂದೇಶ ಬರುವ ಬಗ್ಗೆ ಮುನ್ಸೂಚನೆ ನೀಡಿದೆ.










































