ಕಂಡು: ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಭಾರತದ ವಿಶೇಷ ರಕ್ಷಣಾ ಪಡೆ (Tunnel Rescue Team) ಸೇನೆಯೊಂದಿಗೆ ಜತೆಯಾಗಿ ಕಾರ್ಯಾಚರಣೆ ಮುಂದುವರಿಸಿದೆ.
ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಉಭಯ ದೇಶಗಳ ಪಡೆಗಳು ಜಂಟಿಯಾಗಿ ಶ್ರಮಿಸುತ್ತಿವೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.ನೇಪಾಳದ ಚಿಲಿಮೆ ಮತ್ತು ಲಾಂಗ್ಟಾಂಗ್ ಪ್ರದೇಶಗಳಲ್ಲಿರುವ ಜಲವಿದ್ಯುತ್ ಯೋಜನೆಯ ಸುರಂಗ ತಾಣಗಳಲ್ಲಿ ಭಾರತದ ತಜ್ಞರ ತಂಡ ಹಾಗೂ ನೇಪಾಳ ಸೇನೆ ಭಾನುವಾರದಿಂದ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.
ತ್ರಿಶೂಲಿ ನದಿ ಪಾತ್ರದಲ್ಲಿ ಉಂಟಾದ ಪ್ರವಾಹದಿಂದಾಗಿ ವಿದ್ಯುತ್ ಸ್ಥಾವರಗಳು ನೀರಿನಲ್ಲಿ ಮುಳುಗಿದೆ. ಅಲ್ಲಿ ಸಿಲುಕಿರುವವರನ್ನು ಹೊರತರಲು ಸುಧಾರಿತ ತಾಂತ್ರಿಕ ಉಪಕರಣಗಳೊಂದಿಗೆ ಭಾರತೀಯ ತಂಡ ಕಾರ್ಯಾಚರಣೆ ನಡೆಸುತ್ತಿದೆ.
15 ಜನರ ಸಾಹಸಮಯ ರಕ್ಷಣೆ
ರಕ್ಷಣಾ ಕಾರ್ಯಾಚರಣೆಯ ವೇಳೆ ಜಲವಿದ್ಯುತ್ ಯೋಜನಾ ಪ್ರದೇಶವೊಂದರಿಂದ ಐವರು ಚೀನಾದ ಪ್ರಜೆಗಳು ಹಾಗೂ ಏಳು ಭಾರತೀಯರು ಸೇರಿದಂತೆ ಒಟ್ಟು 15 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ನೇಪಾಳದಲ್ಲಿರುವ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಅವರು, ಭಾರತವು ನೇಪಾಳಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ.ರಕ್ಷಣಾ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
















































