ಪುತ್ತೂರು.ದರ್ಬೆ ಬಳಿ ಹಿಂದೂ ವ್ಯಾಪಾರಿ ಮೇಲೆ ಜೆರಾಕ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗದ್ದಲ,ಗೊಂದಲ ಉಂಟಾದ ಘಟನೆ ನಡೆದಿತ್ತು ಈ ವಿಚಾರವಾಗಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು,ಹಿಂದೂ ಸಮಾಜ ಮೇಲಿನ ದೌರ್ಜನ್ಯ ನಿಲ್ಲಬೇಕೆಂದು ಆಗ್ರಹಿಸಿ ಇಂದು ಹಿಂದೂ ಸಂಘಟನೆ ನೇತೃತ್ವದಲ್ಲಿ ಪುತ್ತೂರು ಚಲೋ ದರ್ಬೆ ವೃತ್ತದಿಂದ ಮಹಾಲಿಂಗೇಶ್ವರ ಗದ್ದೆ ವರೆಗೆ ಮೆರವಣಿಗೆ ನಡೆಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿಂದೂ ಸಂಘಟನೆ ಮುಖಂಡ ಶ್ರೀಕಾಂತ್ ಶೆಟ್ಟಿ ರಾಜ್ಯದಲ್ಲಿ ಓಲೈಕೆ ರಾಜಕಾರಣ ಮೀತಿ ಮೀರಿದ್ದು ಹಿಂದೂಗಳ ಭಾವನೆ ಕೇಳುವವರಿಲ್ಲ,ನಮ್ಮ ಭಾವನೆ ವ್ಯಕ್ತಪಡಿಸಿದಾಗ ಸುಮಾಟೋ ಕೇಸ್ ದಾಖಲು ಮಾಡುತ್ತಾರೆ,

ಪುತ್ತೂರು ಘಟನೆ ವ್ಯವಸ್ಥಿತ ಕೃತ್ಯ ಒಂದು ಘಟನೆ ನಡೆದ ಕೂಡಲೇ ನೂರಾರು ಮಂದಿ ಸೇರಿ ಕಾನೂನು ಕೈಗೆತ್ತಿಕೊಳ್ಳುತ್ತಾರೆ, ಪೊಲೀಸ್ ಜೀಪ್ ಲೀ ಅಂಗಡಿ ಅವರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹಲ್ಲೆಗೆ ಯತ್ನ ಇವರಿಗೆ ಕಾನೂನು ಪೊಲೀಸ್ ಭಯವಿಲ್ಲವೇ?
ಪ್ರಶ್ನಿಸಿದ್ದಾರೆ ,ಸುಖಾಸುಮ್ಮನೆ ಜಗದೀಶ್ ಕಾರಂತ್,ಪ್ರಭಾಕರ ಭಟ್ ಮೇಲೆ ಕೇಸ್ ಮಾಡ್ತಾರೆ ಇದು ಯಾವ ನ್ಯಾಯ? ನಮ್ಮ ತಾಳ್ಮೆ ದೌರ್ಬಲ್ಯವಲ್ಲ ಪೊಲೀಸ್ ಇಲಾಖೆ ಮೂಲಕ ನಮ್ಮ ಧ್ವನಿ ಅಡಗಿಸುವ ಪ್ರಯತ್ನ ಮಾಡಿದ್ದೆ ಆದರೆ ಸಹಿಸಲು ಸಾದ್ಯವಿಲ್ಲ ವೆಂದರು.ವೇದಿಕೆಯಲ್ಲಿ ಬಜರಂಗ ದಳ ಪ್ರಮುಖರಾದ ಶರಣ್ ಪಂಪ್ವೆಲ್,ಪುನೀತ್ ಅತ್ತಾವರ ,ಜಾಗರಣ ಪ್ರಮುಖ ಮೋಹನ್ ದಾಸ್ ರೈ ಮತ್ತಿತರರು ಉಪಸ್ಥಿತರಿದ್ದರು

















































