ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರ್​ಎಸ್​ಎಸ್​ನ​ ಸಾಧನೆಯಲ್ಲ, ಇಡೀ ಸಮಾಜದ ವಿಜಯ: ದತ್ತಾತ್ರೇಯ ಹೊಸಬಾಳೆ

Picture of Savistara

Savistara

Bureau Report

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಬಲಪಂಥೀಯ ಸಂಘಟನೆಯ ಸಾಧನೆಯಲ್ಲ, ಬದಲಾಗಿ ಇಡೀ ಸಮಾಜದ ವಿಜಯ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಬಲಪಂಥೀಯ ಸಂಘಟನೆಯ ಸಾಧನೆಯಲ್ಲ, ಬದಲಾಗಿ ಇಡೀ ಸಮಾಜದ ವಿಜಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಚಿಂತನ ಮಂಥನ ಅಧಿವೇಶನದ ಮೂರನೇ ದಿನವಾದ ಭಾನುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.”ಮುಲಾಯಂ ಸಿಂಗ್ ಯಾದವ್ ಅವರ ಕೈಯಲ್ಲಿ ತನ್ನ ಕಾರ್ಯಕರ್ತರು ಪ್ರಾಣ ಕಳೆದುಕೊಂಡರೂ ಮತ್ತು ರಾಮ ಜನ್ಮಭೂಮಿ ಚಳವಳಿಯಿಂದಾಗಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡರೂ ಆರ್​ಎಸ್ಎಸ್ ಹೃದಯಶೀಲತೆ ಪ್ರದರ್ಶಿಸುತ್ತದೆ. ಆದರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರ್‌ಎಸ್‌ಎಸ್ ಸಾಧನೆಯಲ್ಲ, ಸಾಧನೆಯಲ್ಲ, ಬದಲಾಗಿ ಇಡೀ ಸಮಾಜದ್ದಾಗಿದೆ” ಎಂದರು.

ಆಕ್ರಮಣಕಾರಿ ಮನಸ್ಥಿತಿ ಹೊಂದಿರುವವರು ಭಾರತಕ್ಕೆ ಅಪಾಯ:

ಮೊಘಲ್ ದೊರೆ ಔರಂಗಜೇಬ್ ಸಮಾಧಿ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, “ಆಕ್ರಮಣಕಾರಿ ಮನಸ್ಥಿತಿ ಹೊಂದಿರುವ ಜನರು ಭಾರತಕ್ಕೆ ಅಪಾಯವಾಗಿದ್ದಾರೆ. ನಾವು ಭಾರತೀಯ ನೀತಿಗಳೊಂದಿಗೆ ಇರುವವರೊಂದಿಗೆ ನಿಲ್ಲಬೇಕು. ದೆಹಲಿಯಲ್ಲಿ ‘ಔರಂಗಜೇಬ್ ರಸ್ತೆ’ ಇತ್ತು. ಅದನ್ನು ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಯಿತು. ಇದರ ಹಿಂದೆ ಕೆಲವು ಕಾರಣಗಳಿದ್ದವು. ಗಂಗಾ-ಜಮುನಿ ಸಂಸ್ಕೃತಿಯನ್ನು ಪ್ರತಿಪಾದಿಸುವವರು ಔರಂಗಜೇಬನ ಸಹೋದರ ದಾರಾ ಶಿಕೋನನ ಐಕಾನ್ ಆಗಿ ಮಾಡಲು ಎಂದಿಗೂ ಯೋಚಿಸಲಿಲ್ಲ” ಎಂದು ಹೇಳಿದರು.

“ಬ್ರಿಟಿಷರ ವಿರುದ್ಧ ನಡೆದಿದ್ದು ಸ್ವಾತಂತ್ರ್ಯ ಹೋರಾಟವಾಗಿತ್ತು. ಬ್ರಿಟಿಷರಗಿಂತ ಮೊದಲು ಇದ್ದವರ ವಿರುದ್ಧದ ಹೋರಾಟವೂ ಒಂದು ಸ್ವಾತಂತ್ರ್ಯ ಚಳವಳಿಯಾಗಿತ್ತು. ಮಹಾರಾಣ ಪ್ರತಾಪ್ ಮಾಡಿದ್ದು ಸ್ವಾತಂತ್ರ್ಯ ಹೋರಾಟ” ಎಂದು ಅವರು ಅಭಿಪ್ರಾಯಪಟ್ಟರು.

ಧರ್ಮಾಧಾರಿತ ಮೀಸಲಾತಿ ಸಂವಿಧಾನ ಶಿಲ್ಪಿಗೆ ವಿರುದ್ಧ:

“ಧರ್ಮಾಧಾರಿತ ಮೀಸಲಾತಿಗಳು ನಮ್ಮ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧವಾಗಿವೆ. ಆರ್‌ಎಸ್‌ಎಸ್ ತನ್ನ ಕಾರ್ಯಕರ್ತರನ್ನು ಪ್ರಮುಖ ಸರ್ಕಾರಿ ಹುದ್ದೆಗಳಲ್ಲಿ ನೇಮಕಕ್ಕೆ ಎಂದಿಗೂ ಪ್ರಯತ್ನಿಸಲಿಲ್ಲ, ರಾಜಕೀಯ ಹಸ್ತಕ್ಷೇಪವನ್ನು ಮಾಡುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್​ಎಸ್​ಎಸ್​ ಕಾರ್ಯಕರ್ತರನ್ನು ಮಂತ್ರಿಗಳ ಪಿಎಗಳಾಗಿ ನೇಮಿಸಲು ನಾವು ಎಂದಿಗೂ ಒತ್ತಾಯಿಸಲಿಲ್ಲ” ಎಂದು ಸ್ಪಷ್ಟಪಡಿಸಿದರು.

[t4b-ticker]
error: Content is protected !!