ಜಿಪಂ, ತಾಪಂ ಚುನಾವಣೆಗೆ ಬ್ಯಾಲೆಟ್ ಪೇಪರ್

Picture of Savistara

Savistara

Bureau Report

ಬೆಳಗಾವಿ: ಹೈಕೋರ್ಟ್‌ನಲ್ಲಿ ಸರಕಾರದ ವಿರುದ್ದದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇತ್ಯರ್ಥಗೊಂಡಿದ್ದು, ಮೇ 31ರೊಳಗೆ ಮೀಸಲು ಪಟ್ಟಿ ಕೊಡುವುದಾಗಿ ಸರಕಾರ ತಿಳಿಸಿದೆ. ಪಟ್ಟಿ ಕೊಡುತ್ತಿದ್ದಂತೆ ತಾಪಂ ಹಾಗೂ ಜಿಪಂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ. ಎಸ್. ಸಂಗ್ರೇಶಿ ಹೇಳಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿ, ”ಜಿಲ್ಲಾ ಚುನಾವಣಾಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿ ಮಾಹಿತಿ ಪಡೆದಿದ್ದೇವೆ. ಬ್ಯಾಲೆಟ್ ಪೇಪರ್ ಚುನಾವಣೆ ನಡೆಸುವ ಚಿಂತನೆ ಇದೆ. ಯಾವ ತಿಂಗಳಲ್ಲಿ ಚುನಾವಣೆ ನಡೆಯುತ್ತೆ ಎಂದು ಹೇಳಲು ಆಗದು,” ಎಂದರು.

[t4b-ticker]
error: Content is protected !!