ಕಾಂತಾರ 1 ಚಿತ್ರೀಕರಣ ಸಂದರ್ಭ ಮತ್ತೊಂದು ಅವಘಡ

Picture of Savistara

Savistara

Bureau Report

ಕನ್ನಡ ಖ್ಯಾತ ನಟ ರಿಷಬ್‌ ಶೆಟ್ಟಿ ಅಭಿನಯಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ-1’ ಚಿತ್ರಕ್ಕೆ ಮೇಲೆ ವಿಘ್ನಗಳು ಸಂಭವಿಸುತ್ತಿವೆ. ಕಳೆದ ಅನೇಕ ಸಮಯಗಳಿಂದ ಅವಧಿಯಲ್ಲಿ ಮೂರು ಜನ ಕಲಾವಿದರು ದುರ್ಮರಣಕ್ಕೀಡಾಗಿದ್ದಾರೆ. ಈಗ ಮತ್ತೊಂದು ಭಾರೀ ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಸಮೀಪದ ಮಾಣಿ ಜಲಾಶಯ ಪ್ರದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಚಿತ್ರೀಕರಣದ ದೋಣಿಯೇ ನೀರಿನಲ್ಲಿ ಮುಳುಗಿದೆ. ದೋಣಿಯಲ್ಲಿದ್ದ ನಟ ರಿಷಬ್ ಶೆಟ್ಟಿ ಸೇರಿ ಮೂವತ್ತು ಮಂದಿಯಿದ್ದರು.

ದೋಣಿ ಮಗುಚಿದ ತಕ್ಷಣ ಕಲಾವಿದರು, ತಂತ್ರಜ್ಞರನ್ನು ರಕ್ಷಿಸಲಾಗಿದ್ದು ದೋಣಿಯಲ್ಲಿದ್ದ ಕ್ಯಾಮರಾ, ಇತರೆ ಸಲಕರಣೆಗಳು ನೀರು ಪಾಲಾಗಿರುವ ಮಾಹಿತಿ ಯಿದ್ದು ಹೆಚ್ಚಿನ ವಿವರ ತಿಳಿಯಬೇಕಿದೆ.

[t4b-ticker]
error: Content is protected !!