ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: 20ನೇ ಕಂತು ಬಿಡುಗಡೆ ಇಂದೇ ಬಿಡುಗಡೆ..!

Picture of Savistara

Savistara

Bureau Report

ಪಿಎಂ ಕಿಸಾನ್ – 20ನೇ ಕಂತು ಇಂದು ಬೆಳಗ್ಗೆ 11.00ಗಂಟೆಗೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ 20ನೇ ಕಂತಿನ ಹಣವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದಾರೆ, ದೇಶಾದ್ಯಂತ ಸುಮಾರು 9.7 ಕೋಟಿಗೂ ಹೆಚ್ಚು ರೈತರಿಗೆ ₹20,500 ಕೋಟಿಗೂ ಅಧಿಕ ಮೊತ್ತವನ್ನು ಏಕಕಾಲಕ್ಕೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ.

ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ?

ಕೇಂದ್ರ ಸರ್ಕಾರವು 2019 ರಲ್ಲಿ ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶ ದಿಂದ ಈ ಯೋಜನೆಯನ್ನು ಆರಂಭವಾಯಿತು. ಪ್ರತಿ ವರ್ಷ ರೈತರಿಗೆ 6000 ರೂ. ನೀಡಲಾಗುತ್ತದೆ. ಈ ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ ಕಂತಿನಲ್ಲಿ 2000 ರೂ. ರೈತರ ಖಾತೆಗೆ ಜಮಾ ಆಗುತ್ತದೆ. ನಾಲ್ಕು ತಿಂಗಳಿಗೊಮ್ಮೆ ಈ ಹಣವನ್ನು ನೀಡಲಾಗುತ್ತದೆ. ಇನ್ನು ಯೋಜನೆಯಿಂದ ಕೋಟ್ಯಾಂತರ ರೈತರಿಗೆ ಸಾಕಷ್ಟು ಅನುಕೂಲಕರವಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೃಷಿ ಚಟುವಟಿಕೆಗಳ ಖರ್ಚು ವೆಚ್ಚಕ್ಕೆ ಇದು ಸಹಾಯ ಮಾಡುತ್ತದೆ.

[t4b-ticker]
error: Content is protected !!