ರಾಜ್ಯದ ಅನೇಕ ಕಡೆಗಳಲ್ಲಿ ರೈತರಿಗೆ ಕಾಡು ಪ್ರಾಣಿಗಳ ಉಪಟಳ ಅಧಿಕವಾಗಿ ಬೆಳೆ ಹಾನಿ ದಿನೆ ದಿನೆ ಹೆಚ್ಚುತ್ತಿದೆ. ಕಾಡಾನೆ, ಕಾಡುಹಂದಿ, ನವಿಲು ಹಾಗೂ ಮಂಗಗಳಿಂದ ರೈತರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಆಗಸ್ಟ್ 20 ರಂದು ಕಲಾಪದಲ್ಲಿ ಸರ್ಕಾರದ ಗಮನ ಸೆಳೆದು ಅರಣ್ಯ ಸಚಿವರಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಒತ್ತಾಯಿಸಿದರು.
ಇಲ್ಲಿದೆ ಹರೀಶ್ ಪೂಂಜಾ ರವರು ಸದನದಲ್ಲಿ ಚರ್ಚಿಸಿದ ವಿಡಿಯೋ 👇🏻👇🏻














































