ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ಸದಸ್ಯರ ಪಟ್ಟಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹೆಸರು!

Picture of Savistara

Savistara

Bureau Report

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿತ್ತು. ಇದೀಗ ಪ್ರಾಧಿಕಾರದ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಗಿದ್ದಾರೆ. ಇನ್ನು ಸದಸ್ಯರ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೆಸರು ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಸದಸ್ಯರ ಪಟ್ಟಿಯಲ್ಲಿ ಬಹುತೇಕ ಮಂದಿ ಬೆಂಗಳೂರಿನ ಶಾಸಕರು, ಪರಿಷತ್ ಸದಸ್ಯರು ಇದ್ದಾರೆ. ಆದರೆ ಯತೀಂದ್ರ ಅವರ ಹೆಸರು ಸೇರಿಸಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು: ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರಾಧಿಕಾರದ ಅಧ್ಯಕ್ಷರಾದರೆ ಸದಸ್ಯರ ಪಟ್ಟಿಯಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೇಮಕಗೊಂಡಿರುವ ಸದಸ್ಯರ ಪಟ್ಟಿಯಲ್ಲಿ ಬಹುತೇಕ ಮಂದಿ ಬೆಂಗಳೂರು ಭಾಗದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಇದ್ದಾರೆ. ಆದರೆ ಯತೀಂದ್ರ ಹೆಸರನ್ನು ಸೇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ತಕ್ಷಣದಿಂದ ಗ್ರೇಟರ್ ಬೆಂಗಳೂರು ಜಾರಿಗೆ ಬರಲಿದೆ. ಸಿದ್ದರಾಮಯ್ಯ ಪದನಿಮಿತ್ತ ಅಧ್ಯಕ್ಷರಾದರೆ, ಡಿಸಿಎಂ ಡಿಕೆ ಶಿವಕುಮಾರ್ ಪದನಿಮಿತ್ತ ಉಪಾಧ್ಯಕ್ಷರಾಗಿದ್ದಾರೆ. ಉಳಿದಂತೆ 73 ಸದಸ್ಯರನ್ನು ಪ್ರಾಧಿಕಾರ ಒಳಗೊಂಡಿದೆ.

ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಗೆ ಸದಸ್ಯರ ಪಟ್ಟಿಯಲ್ಲಿದ್ದಾರೆ. ಅಲ್ಲದೆ, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ ಜೆ ಜಾರ್ಜ್, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಜಮರ್ ಅಹ್ಮದ್ ಖಾನ್ ಕೂಡಾ ಪದನಿಮಿತ್ತ ಸದಸ್ಯರ ಪಟ್ಟಿಯಲ್ಲಿ ಇದ್ದಾರೆ. ಇದರ ಜೊತೆಗೆ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಇರುವುದು ಸಹಜವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ.

ಸದಸ್ಯರ ಪಟ್ಟಿಯಲ್ಲಿ ಯಾರೆಲ್ಲಾ?

  • ನಿರ್ಮಲಾ ಸೀತರಾಮನ್.
  • ಶೋಭಾ ಕರಂದ್ಲಾಜೆ
  • ರಾಮಲಿಂಗಾ ರೆಡ್ಡಿ
  • ಕೆಜೆ ಜಾರ್ಜ್
  • ಬೈರತಿ ಸುರೇಶ್
  • ದಿನೇಶ್ ಗುಂಡೂರಾವ್ಕೃ
  • ಕೃಷ್ಣ ಬೈರೇಗೌಡ
  • ಜಮೀರ್ ಅಹ್ಮದ್ ಖಾನ್
  • ಸಿಎನ್ ಮಂಜುನಾಥ್
  • ಪಿ.ಸಿ ಮೋಹನ್
  • ತೆಜಸ್ವಿ ಸೂರ್ಯ
  • ನಾರಾಯಣ ಕೊರಗಪ್ಪ
  • ಜೈರಾಮ್ ರಮೇಶ್
  • ಜಗ್ಗೇಶ್
  • ಲಹರ್ ಸಿಂಗ್
  • ಎಸ್ ಟಿ. ಚಂದ್ರಶೇಖರ್
  • ಭೈರತಿ ಬಸವರಾಜ
  • ಎಸ್ ಟಿ ಸೋಮಶೇಖರ
  • ಮುನಿರತ್ನ
  • ಎಸ್ ಮುನಿರಾಜು
  • ಕೆ ಗೋಪಾಲಯ್ಯ
  • ಡಾ ಸಿಎನ್ ಅಶ್ವತ್ಥ ನಾರಾಯಣ
  • ಎಸಿ ಶ್ರೀನಿವಾಸ್
  • ಎಸ್ ರಘು
  • ರಿಜ್ವಾನ್ ಅರ್ಷದ್
  • ಎನ್ ಎ ಹ್ಯಾರಿಸ್
  • ಎಸ್ ಸುರೇಶ್ ಕುಮಾರ್
  • ಪ್ರಿಯಕೃಷ್ಣ
  • ಎಂ ಕೃಷ್ಣಪ್ಪ
  • ಉದಯ ಗರುಡಾಚಾರ್
  • ರವಿ ಸುಬ್ರಹ್ಮಣ್ಯ
  • ಆರ್ ಅಶೋಕ್
  • ಸಿ ಕೆ ರಘುಮೂರ್ತಿ
  • ಮಂಜುಳ ಲಿಂಬಾವಳಿ
  • ಸತೀಶ್ ರೆಡ್ಡಿ
  • ಎಂ ಕೃಷ್ಣಪ್ಪ
  • ಎಸ್ ಪುಟ್ಟಣ್ಣ
  • ಕೆ ಗೋವಿಂದ ರಾಜ್
  • ಎಚ್‌ಎಸ್ ಗೋಪಿನಾಥ್
  • ಬಿ ಕೆ ಹರಿಪ್ರಸಾದ್
  • ಟಿ ಎನ್ ಜಯರಾಯಿಗೌಡ
  • ಕೇಶವ ಪ್ರಸಾದ್
  • ಎನ್ ನಾಗರಾಜು
  • ನಸೀರ್ ಅಹ್ಮದ್
  • ಶರವಣ ಟಿಎ
  • ಯತೀಂದ್ರ ಸಿದ್ದರಾಮಯ್ಯ
[t4b-ticker]
error: Content is protected !!