ಬೆಳ್ಳಾರೆಯಲ್ಲೊಂದು ವೇದಾಮೃತ ಚಿಕಿತ್ಸಾಲಯ

Picture of Savistara

Savistara

Bureau Report

ಬೆಳ್ಳಾರೆಯ ಕೆಳಗಿನ ಪೇಟೆ ಹರ್ಷ ಕಾಂಪ್ಲೆಕ್ಸ್, ಕಿರಣ್ ಪ್ರಿಂಟರ್ಸ್ ಎದುರು, ಸಿ. ಎ. ಬ್ಯಾಂಕ್ ಹತ್ತಿರ ವೇದಾಮೃತ ಚಿಕಿತ್ಸಾಲಯದಲ್ಲಿ ಶೀತ, ಕೆಮ್ಮು, ಅಲರ್ಜಿ, ಅಸ್ತಮಾ ಹಾಗೂ ಇನ್ನಿತರ ಶ್ವಾಸಕೋಶದ ತೊಂದರೆಗಳಿಗೆ ಆಯುರ್ವೇದ ಔಷಧಿ ವಿತರಣೆಯಾಗುತ್ತಿದೆ.

ಈ ಔಷಧಿಯು ವರ್ಷಕ್ಕೆ ಒಂದು ಬಾರಿ, ಮಾರ್ಗಶಿರ ಪೌರ್ಣಮಿ ದಿನದಂದು ಕೊಡುವ ಔಷಧಿಯಾಗಿದೆ ಡಿಸೆಂಬರ್ 05ರಂದು, ಶುಕ್ರವಾರ ಮಾರ್ಗಶಿರ ಪೌರ್ಣಮಿ (ಹುಣ್ಣಿಮೆ)ಯಂದು ಸಮಯ : ಮುಂಜಾನೆ 5-30 ರಿಂದ 6-30ರವರೆಗೆ ಈ ಔಷಧಿ ಸೇವನೆ ಮಾಡಬಹುದಾಗಿದೆ.

ಅಲರ್ಜಿ, ಅಸ್ತಮ, ನೆಗಡಿ, ಕೆಮ್ಮು ಹಾಗೂ ಇನ್ನಿತರ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ಔಷಧಿ ತೆಗೆದುಕೊಳ್ಳಲು ಇಚ್ಛಿಸುವವರು ಡಿ.30 ಆದಿತ್ಯವಾರ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಹಾಗೂ ಡಿ.05ರಂದು ವೇದಾಮೃತ ಚಿಕಿತ್ಸಾಲಯಕ್ಕೆ ಬಂದು ಬೆಳಿಗ್ಗೆ 5-30ರಿಂದ 6-30ರ ಒಳಗೆ ಔಷಧಿಯನ್ನು ಖಾಲಿ ಹೊಟ್ಟೆಗೆ ಸೇವಿಸಬೇಕು.

2 ವರ್ಷದಿಂದ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದು. ಇದು ಶುದ್ಧ ಆಯುರ್ವೇದ ಔಷಧವಾಗಿರುವುದರಿಂದ, ಔಷಧಿ ಸೇವನೆಯ ದಿನ ಪಥ್ಯ ಆಹಾರ ಸೇವನೆ ಮಾಡಬೇಕು. ಮಾಂಸಾಹಾರ ನಿಷಿದ್ದವಾಗಿರಿತ್ತದೆ. ಮೊದಲು ನೋಂದಾಯಿಸಿದ 300 ಜನರಿಗೆ ಮಾತ್ರ ಔಷಧಿ ವಿತರಿಸಲಾಗುವುದುಎಂದು ಡಾ| ಕಾವ್ಯ ಜೆ. ಎಚ್ ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆ.: 9741439354

ನೋಂದಣಿಗಾಗಿ ಸಂಪರ್ಕಿಸಿ ಸಮಯ : ಮಧ್ಯಾಹ್ನ ಗಂಟೆ 1-00ರಿಂದ 4-00

[t4b-ticker]
error: Content is protected !!