ಉಡುಪಿ: ಪ್ರಧಾನಿ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣಮಠಕ್ಕೆ ಬರುವುದು ಪ್ರಧಾನಿ ಕಾರ್ಯಾಲಯದಿಂದ ಶನಿವಾರ ಖಚಿತವಾಗುತ್ತಿದ್ದಂತೆ, ಹೆಲಿಪ್ಯಾಡ್, ಕಾಂಕ್ರೀಟ್ ರಸ್ತೆ, ಭದ್ರತಾ ವ್ಯವಸ್ಥೆ ಸಹಿತ ಮೂಲ ಸೌಲಭ್ಯಗಳ ತಯಾರಿಗೆ ಮತ್ತಷ್ಟು ವೇಗ ದೊರೆತಿದೆ.
ನವೆಂಬರ್ 28 ರಂದು ದೆಹಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬೆಳಗ್ಗೆ 11:05 ಕ್ಕೆ ಬರಲಿದ್ದಾರೆ. ಅಲ್ಲಿಂದ ಬೆಳಿಗ್ಗೆ 11:10 ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.
ರೋಡ್ಶೋ ರದ್ದು : ಈ ಹಿಂದೆ ಪ್ರಧಾನಿಯವರ ಸ್ವಾಗತಕ್ಕಾಗಿ ರೋಡ್ ಶೋ ನಡೆಸಲು ಯೋಜಿಸಲಾಗಿತ್ತು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ರೋಡ್ ಶೋ ರದ್ದುಗೊಳಿಸಲಾಗಿದೆ. ಹೆಲಿಪ್ಯಾಡ್ನಿಂದ ನೇರವಾಗಿ ಮಧ್ಯಾಹ್ನ 12 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಮೋದಿ, ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ತದನಂತರ ಐತಿಹಾಸಿಕ ‘ಲಕ್ಷ ಕಂಠ ಗೀತ ಗಾಯನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ಉಡುಪಿ ನಂತರ ಗೋವಾಕ್ಕೆ ಭೇಟಿ : ಉಡುಪಿಯ ಕಾರ್ಯಕ್ರಮ ಮುಗಿಸಿದ ಬಳಿಕ, ಮಧ್ಯಾಹ್ನ 1:35ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ನಿಂದ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಗೋವಾಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.
ರೋಡ್ ಶೋ ಇಲ್ಲ, ಕಾರ್ಯಕ್ರಮ ಪಟ್ಟಿ ಹೀಗಿದೆ
ಬೆಳಗ್ಗೆ 8.15: ದಿಲ್ಲಿವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿಪಯಣ.
ಬೆಳಗ್ಗೆ 11.05: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
ಬೆಳಗ್ಗೆ 11.10: ಹೆಲಿಕಾಪ್ಟರ್ ಮೂಲಕ ಪಯಣ.
ಬೆಳಗ್ಗೆ 11.35: ಆದಿ ಉಡುಪಿ ಹೆಲಿಪ್ಯಾಡ್ಗೆ ಆಗಮನ.
ಬೆಳಗ್ಗೆ 11.45: ಆದಿ ಉಡುಪಿ ಹೆಲಿಪ್ಯಾಡ್ನಿಂದ ರಸ್ತೆ ಪಯಣ.
ಮಧ್ಯಾಹ್ನ 12: ಶ್ರೀಕೃಷ್ಣ ಮಠ ಭೇಟಿ, ದೇವರ ದರ್ಶನ, ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿಭಾಗಿ.
ಮಧ್ಯಾಹ್ನ 12ರಿಂದ 1.30: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಶ್ರೀ ಭೇಟಿ.
ಮಧ್ಯಾಹ್ನ 1.35: ಶ್ರೀಕೃಷ್ಣಮಠದಿಂದ ನಿರ್ಗಮನ.
ಮಧ್ಯಾಹ್ನ 1.45: ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣ.
2.15: ವಾಯುಪಡೆ ವಿಮಾನ ಮೂಲಕ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಪಯಣ.
3.05: ದಾಬೋಲಿಂ ವಿಮಾನ ನಿಲ್ದಾಣದಿಂದ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿಭಾಗಿ.
ಭರಪೂರ ಸಿದ್ಧತೆರಾಷ್ಟ್ರೀಯ ಹೆದ್ದಾರಿಯ 169(ಎ) ಆದಿ ಉಡುಪಿ ಕರಾವಳಿ ಬೈಪಾಸ್ ಮಧ್ಯೆ 400 ಮೀ. ಕಾಂಕ್ರೀಟ್ ಕಾಮಗಾರಿ ಭರದಿಂದ ಸಾಗುತ್ತಿದೆ. ಒಂದು ವಾರದ ಕ್ಯೂರಿಂಗ್ ನಡುವೆ ಬಲಬದಿ ರಸ್ತೆ ಪ್ರಧಾನಿ ವಾಹನ ಸಂಚಾಕ್ಕೆ ಸೀಮಿತವಾಗಿ ತೆರವಾಗಲಿದೆ. ಆದಿ ಉಡುಪಿಯ ಎಪಿಎಂಸಿ ಎದುರಿಗೆ ಈಗಾಗಲೇ ಇರುವ ಮೂರು ಹೆಲಿಪ್ಯಾಡ್ಗಳ ದುರಸ್ತಿ, ಸಂಪರ್ಕ ರಸ್ತೆ, ಮಾರ್ಕಿಂಗ್ ಪ್ರಗತಿಯಲ್ಲಿದೆ. ಪಕ್ಕದಲ್ಲೇ ನಾಲ್ಕನೇ ಹೆಲಿಪ್ಯಾಡ್ ನಿರ್ಮಾಣ ಲೋಕೋಪಯೋಗಿ ಇಲಾಖೆಯಿಂದ 67 ಲಕ್ಷ ರೂ. ವೆಚ್ಚದಲ್ಲಿನಡೆಯುತ್ತಿದೆ.
ನ.24ರಂದು ಕಾಮಗಾರಿ ಬಹುತೇಕ ಪೂರ್ಣವಾಗಲಿದೆ. ಹೆಲಿಪ್ಯಾಡ್, ರಸ್ತೆ ನಿರ್ಮಾಣವು ಶ್ವಾನ ದಳ (ಲ್ಯಾಬ್ರಡಾರ್ ತಳಿಯ ತೇಜಸ್), ಬಾಂಬ್ ನಿಷ್ಕ್ರಿಯ ದಳ, ವಿಧ್ವಂಸಕ ಕೃತ್ಯ ತಡೆ ತಪಾಸಣೆ ವಿಭಾಗದ ಏಳು ಸಿಬ್ಬಂದಿ ಉಪಸ್ಥಿತಿಯಲ್ಲಿನಡೆಯುತ್ತಿದ್ದು, ಲೋಹಶೋಧಕ ಮೂಲಕ ಕಬ್ಬಿಣ/ಲೋಹದ ಅಂಶಗಳನ್ನು ಪತ್ತೆ ಹಚ್ಚಿ ತೆರವು ಮಾಡಲಾಗುತ್ತಿದೆ.
ಯಾರು ಏನಂದ್ರು?
ಪ್ರಧಾನಿ ಆಗಮನ ಖಚಿತವಾಗಿದೆ. ಹೆಲಿಪ್ಯಾಡ್ನಿಂದ ಶ್ರೀಕೃಷ್ಣಮಠ, ಮುಖ್ಯ ವೇದಿಕೆ ತನಕ ಸಮಗ್ರ ಭದ್ರತಾ ವ್ಯವಸ್ಥೆ ನಿಟ್ಟಿನಲ್ಲಿಎಸ್ಪಿಜಿ ಒಂದೆರಡು ದಿನಗಳಲ್ಲಿಬರಲಿದೆ. ಶ್ರೀಕೃಷ್ಣಮಠದಲ್ಲೂಸಿದ್ಧತೆಗಳಾಗಬೇಕು. ಪ್ರತಿಯೊಂದು ಸ್ಪಾಟ್ಗಳನ್ನು ಎಸ್ಪಿಜಿ ಪರಿಶೀಲಿಸಿ ಎಲ್ಲಿ, ಏನು ಬೇಕು, ಬೇಡ ಎನ್ನುವುದನ್ನು ಸೂಚಿಸಲಿದೆ, ನಾವು ಪಾಲಿಸಲಿದ್ದೇವೆ ಉಡುಪಿ ಉಪ ವಿಭಾಗದ ಡಿವೈಎಸ್ಪಿಯಾದ ಡಿ.ಟಿ.ಪ್ರಭು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಧಾರ್ಮಿಕತೆ ಹೆಚ್ಚಲಿದೆ. ಶ್ರೀಕೃಷ್ಣನಿಗೆ ಅರ್ಪಿಸಿದ ನೈವೇದ್ಯವನ್ನು ಪ್ರಧಾನಿಗೆ ಪ್ರಸಾದ ರೂಪದಲ್ಲಿನೀಡಲಾಗುವುದು. ಉಡುಪಿ ಶಾಶ್ವತವಾಗಿ ನೆನಪಿನಲ್ಲಿಉಳಿಯುವಂತಹ ಸ್ಮರಣಿಕೆಯ ಸಿದ್ಧತೆ ನಡೆದಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಪಾದರು ಶ್ರೀ ಸುಗುಣೇಂದ್ರತೀರ್ಥ ಹೇಳಿದರು.ಉಡುಪಿಗೆ ಪ್ರಧಾನಿ ಆಗಮನದ ಖಚಿತ ಮಾಹಿತಿ ಪಿಎಂ ಕಚೇರಿಯಿಂದ ಅಕೃತವಾಗಿ ಶನಿವಾರ ದೊರೆತಿದೆ. ಮೂಲ ಸೌಲಭ್ಯ ಕಾಮಗಾರಿ ನಡೆಯುತ್ತಿದ್ದು, ಪೂರ್ವ ತಯಾರಿ ಸಿದ್ಧತೆಗಳಿಗೆ ಇನ್ನಷ್ಟು ವೇಗ ನೀಡಲಾಗುವುದು ಉಡುಪಿಯ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಹೇಳಿದರು.22ಎಸ್ಆರ್ಬಿ ಹೆಲಿ- ಆದಿ ಉಡುಪಿಯಲ್ಲಿಹೆಲಿಪ್ಯಾಡ್ ನಿರ್ಮಾಣ ವೇಳೆ ಶನಿವಾರ ಶ್ವಾನ, ಲೋಹ, ಬಾಂಬ್ ನಿಷ್ಕಿ್ರಯ ದಳದಿಂದ ಶೋಧ ನಡೆಸಲಾಯಿತು.










































