ಶೃಂಗೇರಿ, ಬಾಳೆಹೊನ್ನೂರು, ಆಲ್ದೂರು ರಸ್ತೆ ಅಭಿವೃದ್ಧಿಗೆ ಸಂಸದ ಕೋಟಾರಿಂದ ನಿತಿನ್ ಗಡ್ಕರಿಗೆ ಮನವಿ

Picture of Savistara

Savistara

Bureau Report

ಚಿಕ್ಕಮಗಳೂರು: ಶೃಂಗೇರಿ, ಬಾಳೆಹೊನ್ನೂರು, ಆಲ್ದೂರು ಮೂಲಕ ಚಿಕ್ಕಮಗಳೂರು ಸೇರುವ ಲೋಕೋಪಯೋಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಸದರಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ರಾಜ್ಯ ಪಿಡಬ್ಲ್ಯೂಡಿ ಇಲಾಖೆಯ ಮೂಲಕ ಪ್ರಸ್ತಾಪಿತ 50 ಕೋಟಿ ರೂಪಾಯಿಗಳನ್ನು ಕೇಂದ್ರ ಸಿ.ಆರ್.ಐ.ಎಫ್ ನಿಧಿಯಿಂದ ಮಂಜೂರು ಮಾಡಬೇಕೆಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಭೂಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಚಿಕ್ಕಮಗಳೂರು ಸೇರಿದಂತೆ, ರಾಜ್ಯದ ಅನೇಕ ಭಾಗಗಳಿಂದ ಶೃಂಗೇರಿ ಮಠಕ್ಕೆ ಬರುವ ಭಕ್ತರೂ ಸೇರಿದಂತೆ, ಅನೇಕ ಪ್ರಯಾಣಿಕರು ಇದೇ ರಸ್ತೆಯನ್ನು ಬಳಸುತ್ತಿದ್ದು, ರಸ್ತೆಯ ಅವ್ಯವಸ್ಥೆಯನ್ನು ತುರ್ತಾಗಿ ಸರಿಪಡಿಸಲು ಸಿ.ಆರ್.ಐ.ಎಫ್ ನಿಧಿ ಬಿಡುಗಡೆ ಮಾಡಲು ಮನವಿ ಮಾಡಿದ ಕೋಟ, ಸದರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಸಚಿವ ಗಡ್ಕರಿಯವರಿಗೆ ಕೋರಿಕೆ ಸಲ್ಲಿಸಿದ್ದಾರೆ.

[t4b-ticker]
error: Content is protected !!