ಸುಳ್ಯ: ಸುಳ್ಯ ತಾಲೂಕಿನಾದ್ಯಂತ್ವ ನಿನ್ನೆ ರಾತ್ರಿ 9.30 ಸುಮಾರಿಗೆ ಸಿಡಿಲು,ಗಾಳಿ ಸಹಿತ ಮಳೆ ಬಂದಿದ್ದು ಈ ಪರಿಣಾಮ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಕನಕಮಜಲು ನ ಪಂಜಿಗುಂಡಿ ಬಳಿ ಮರವೊಂದು 33 ಕೆವಿ ವಿದ್ಯುತ್ ಕಂಬಕ್ಕೆ ಬಿದ್ದು ವಿದ್ಯುತ್ ಸರಬರಾಜು ಲಿ ವ್ಯತ್ಯಯಗೊಂಡಿದೆ.

ರಸ್ತೆ ಸಂಚಾರ ಕೂಡ ರಾತ್ರಿ ಅಡಚಣೆ ಉಂಟಾಗಿದ್ದು ನಂತರ ಮರವನ್ನು ತೆರವುಗೊಳಿಸಲಾಗಿದ್ದು ಹೆದ್ದಾರಿ ಬದಿಯಲ್ಲಿ ಅನೇಕ ವಿದ್ಯುತ್ ತಂತಿಗಳು ಮರದ ಕೆಳಗಡೆ ಹಾದುಹೋಗಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದ್ದು ತಕ್ಷಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ













































