ಜಿಪಂ ಚುನಾವಣೆ ಚರ್ಚೆಗೆ ರಾಜಕೀಯ ವಲಯದಲ್ಲಿ ಹಿಂಜಿರಿಕೆ! ಚುನಾವಣೆಗೆ ಒಂದು ಕೋಟಿ ರೂ. ತರುವುದೆಲ್ಲಿಂದ ಎಂಬುದೇ ಚಿಂತೆ!

Picture of Savistara

Savistara

Bureau Report

ಚಿತ್ರದುರ್ಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರಕಾರ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳ ವಲಯದಲ್ಲಿ ಚುನಾವಣಾ ಚರ್ಚೆಗಳು ಆರಂಭವಾಗಿವೆ. ಆದರೆ, ಯಾವ ಪಕ್ಷದ ಆಕಾಂಕ್ಷಿಗಳಲ್ಲೂ ತುಂಬು ಉತ್ಸಾಹವೇನೂ ಕಂಡು ಬರುತ್ತಿಲ್ಲ. ಈ ನಿರುತ್ಸಾಹದ ಹಿಂದಿರುವುದು ಚುನಾವಣಾ ವೆಚ್ಚದ ಹೊರೆ. ಈಗ ಮುಂದಿನ ಎರಡು, ಮೂರು ವರ್ಷಗಳ ಕಾಲ ವಿಧಾನಸಭೆ, ಲೋಕಸಭೆ ಯಾವುದೇ ಚುನಾವಣೆ ಇಲ್ಲ. ಹೀಗಾಗಿ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ ಎನ್ನುವ ಅಂಶ ಆಕಾಂಕ್ಷಿಗಳಿಗೆ ಮನವರಿಕೆಯಾಗಿರುವುದರಿಂದ ಉತ್ಸಾಹ ತೋರಿಸುತ್ತಿಲ್ಲ.

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರಕಾರ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳ ವಲಯದಲ್ಲಿ ಚುನಾವಣಾ ಚರ್ಚೆಗಳು ಆರಂಭವಾಗಿವೆ. ಆದರೆ, ಯಾವ ಪಕ್ಷದ ಆಕಾಂಕ್ಷಿಗಳಲ್ಲೂ ತುಂಬು ಉತ್ಸಾಹವೇನೂ ಕಂಡು ಬರುತ್ತಿಲ್ಲ.

ಈ ನಿರುತ್ಸಾಹದ ಹಿಂದಿರುವುದು ಚುನಾವಣಾ ವೆಚ್ಚದ ಹೊರೆ. ಈಗ ಮುಂದಿನ ಎರಡು, ಮೂರು ವರ್ಷಗಳ ಕಾಲ ವಿಧಾನಸಭೆ, ಲೋಕಸಭೆ ಯಾವುದೇ ಚುನಾವಣೆ ಇಲ್ಲ. ಈ ಚುನಾವಣೆಗಳು ಸಮೀಪದಲ್ಲಿದ್ದಾಗ ಅಲ್ಲಿನ ಶಾಸಕ ಸ್ಥಾನದ ಆಕಾಂಕ್ಷಿಗಳು ಆರ್ಥಿಕವಾಗಿ ಬೆನ್ನಿಗೆ ನಿಲ್ಲುವುದು ಮಾತ್ರವಲ್ಲದೇ, ಒಂದಷ್ಟು ಮತ ಬೆಂಬಲ ಅಣಿಗೊಳಿಸುವುದಕ್ಕೂ ಕೈ ಜೋಡಿಸುತ್ತಾರೆ ಎನ್ನುವ ನಿರೀಕ್ಷೆ, ಲೆಕ್ಕಾಚಾರ ಇರುತ್ತಿತ್ತು. ಈಗ ಅಂತಹ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ ಎನ್ನುವ ಅಂಶ ಆಕಾಂಕ್ಷಿಗಳಿಗೆ ಮನವರಿಕೆಯಾಗಿರುವುದರಿಂದ ಉತ್ಸಾಹ ತೋರಿಸುತ್ತಿಲ್ಲ.

ಚಿತ್ರದುರ್ಗ ಜಿಲ್ಲೆಯಲ್ಲಿ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರ ಹೊರತು ಪಡಿಸಿದರೆ ಉಳಿದೆಲ್ಲ ಕ್ಷೇತ್ರಗಳಲ್ಲಿಕಾಂಗ್ರೆಸ್‌ ಶಾಸಕರು ಇರುವುದರಿಂದ ಸಹಜವಾಗಿ ಎಲ್ಲ ಕಡೆ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸ್ಪರ್ಧೆಗಿಳಿಯಲು ಆಕಾಂಕ್ಷಿಗಳು ಒಲವು ತೋರಿಸುತ್ತಿದ್ದಾರೆ. ಹಿರಿಯೂರು ಮತ್ತು ಚಳ್ಳಕೆರೆ ಇದಕ್ಕೆ ಅಪವಾದವಾಗಿದ್ದು, ಈ ಭಾಗದಲ್ಲಿ ಜೆಡಿಎಸ್‌ನಿಂದಲೂ ಕಣಕ್ಕಿಳಿಯುವ ಉತ್ಸಾಹವನ್ನು ಕೆಲ ಆಕಾಂಕ್ಷಿಗಳು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಜಿಪಂ, ತಾಪಂ ಚುನಾವಣೆಗಳಲ್ಲಿ ಹಳಬರು ತೋರಿಸುತ್ತಿದ್ದ ಉತ್ಸಾಹವನ್ನು ಈ ಬಾರಿ ತೋರಿಸುತ್ತಿಲ್ಲ. ಕಾರಣ ಮತ್ತದೇ ಆರ್ಥಿಕ ಹೊರೆಯದ್ದು. ಮೊದಲಿನ ಹೇಗೋ ನಡೆದುಹೋಗುತ್ತದೆ ಎನ್ನುವ ಪರಿಸ್ಥಿತಿ ಈಗಿಲ್ಲಎನ್ನುತ್ತಾರೆ.

‘ಜಿಪಂ ಸದಸ್ಯರಾದವರಿಗೆ ವಾರ್ಷಿಕ 30 ಲಕ್ಷ ಅನುದಾನ ಬರುತ್ತದೆ. ಐದು ವರ್ಷಗಳಿಗೆ ಒಂದೂವರೆ ಕೋಟಿ ರೂ. ಅನುದಾನ ಬರುತ್ತದೆ. ಈ ಅನುದಾನ ಅಭಿವೃದ್ದಿ ಕೆಲಸ ಮಾಡಲು ಒಂದು ಕೋಟಿ ರೂ, ಬಂಡವಾಳ ಹೂಡಿ ಸದಸ್ಯರಾಗಬೇಕಾ? ಕೊಟಿಗಟ್ಟಲೇ ಹಾಕಿದರೂ ಗೆಲ್ಲುತ್ತೇವೆ ಎನ್ನುವ ಗ್ಯಾರಂಟಿ ಎಲ್ಲಿದೆ? ಮೊದಲೇ ನಮ್ಮ ಸರಕಾರ ಗ್ಯಾರಂಟಿಗಳ ಕಾಲದಲ್ಲಿ ಹೈರಾಣಾಗಿದೆ. ಅಭಿವೃದ್ಧಿಗೆಂದು ಯಾವ ಬಾಬ್ತಿನಲ್ಲೂಅನುದಾನ ಬಿಡುಗಡೆ ಮಾಡುತ್ತಿಲ್ಲ. ಬಹುತೇಕ ಹಿಂದಿನ ಕಾಮಗಾರಿಗಳ ಬಿಲ್‌ಗೆ ಬರುವ ಹಣವನ್ನೆಲ್ಲ ಹೊಂದಿಸುವ ಕೆಲಸ ನಡೆಯುತ್ತಿದೆ. ಇಂತಾದ್ದರಲ್ಲಿ ನಾವು ಸದಸ್ಯರಾಗಿ ಮಾಡುವುದಾದರೂ ಏನು?’ ಎಂಬುದು ಹೆಸರು ಹೇಳಲಿಚ್ಚಿಸದ ಮಾಜಿ ಸದಸ್ಯರೊಬ್ಬರ ಉವಾಚ.

ಹಿರಿಯೂರು ಮತ್ತು ಚಳ್ಳಕೆರೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಒಂದಷ್ಟು ಆಕಾಂಕ್ಷಿಗಳು ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಉಳಿದಂತೆ ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆಯಲ್ಲಿ ಬಿಜೆಪಿ ಆಕಾಂಕ್ಷಿಗಳು ಮುಂಚೂಣಿಯಲ್ಲಿದ್ದಾರೆ. ಈ ಎರಡೂ ಪಕ್ಷಗಳಲ್ಲಿ ಟಿಕೆಟ್‌ ಹೊರತುಪಡಿಸಿದರೆ ಗೆಲುವಿಗಾಗಿ ಪಕ್ಷದ ನಾಯಕರನ್ನಾಗಲೀ, ಶಾಸಕ ಸ್ಥಾನದ ಆಕಾಂಕ್ಷಿಗಳನ್ನಾಗಲೀ ನಂಬಿಕೊಳ್ಳುವಂತಿಲ್ಲ. ಅಂತಹ ದೊಡ್ಡ ರಿಸ್ಕ್‌ಗೆ ಯಾರೊಬ್ಬರೂ ತಯಾರಿಲ್ಲ. ಬಹುತೇಕ ಕಡೆ ಪಕ್ಷದಿಂದ ಸ್ಪರ್ಧಿಸಿದರೆ ಸಾಕಪ್ಪಾ ಎನ್ನುವ ಸ್ಥಿತಿ ಇದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಎಲ್ಲ ಪಕ್ಷದಲ್ಲೂ ನಿರುತ್ಸಾಹ’ಶಾಸಕರು, ಪಕ್ಷವನ್ನು ನಂಬಿಕೊಂಡು ಈಗ ಅಖಾಡಕ್ಕಿಳಿಯುವ ಪರಿಸ್ಥಿತಿ ಇಲ್ಲ. ನಮ್ಮ ಬಳಿ ಹಣ ಇದ್ದರೆ ಮಾತ್ರ ಸ್ಪರ್ಧಿಸಬೇಕು. ಶಾಸಕರು ಈಗ ಜಿಪಂ ಸದಸ್ಯರನ್ನು ಗೆಲ್ಲಿಸುವ ರಿಸ್ಕ್‌ ತೆಗೆದುಕೊಳ್ಳಲು ತಯಾರಿಲ್ಲ. ಯಾರನ್ನು ಗೆಲ್ಲಿಸಿಕೊಂಡರೂ ನಮ್ಮ ಚುನಾವಣೆಯಲ್ಲಿ ನಾವು ಮಾಡಬೇಕಾದ ಸರ್ಕಸ್‌, ಚುನಾವಣಾ ವೆಚ್ಚ ಏನೂ ಕಡಿಮೆ ಆಗುವುದಿಲ್ಲ. ಹಣವಿದ್ದವರು ಬಂದು ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ ಎನ್ನುವ ಧೋರಣೆಯಲ್ಲಿದ್ದಾರೆ. ಈಗೇನಿದ್ದರೂ ಪೊಲಿಟಿಕಲ್‌ ಇಮೇಜ್‌ ಬಯಸುವವರು ಮಾತ್ರ ರಿಸ್ಕ್‌ ತೆಗೆದುಕೊಳ್ಳಬೇಕಾಗಿದೆ’ ಎನ್ನುತ್ತಾರೆ. ಇದು ಆಡಳಿತಾರೂಢ ಕಾಂಗ್ರೆಸ್‌ನ ಸ್ಥಿತಿಯಾದರೆ, ಬಿಜೆಪಿ, ಜೆಡಿಎಸ್‌ನ ಲೆಕ್ಕಾಚಾರವೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.ಕ್ಷೇತ್ರ ಮರು ವಿಂಗಡಣೆ ಗುಮ್ಮಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಕ್ಷೇತ್ರ ಮರು ವಿಂಗಡಣೆಯ ಸಾಧ್ಯತೆಗಳಿರುವುದರಿಂದ ಶಾಸಕರು ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಬಹುತೇಕರು ಹೊಸ ಕ್ಷೇತ್ರಗಳತ್ತ ಚಿತ್ತ ಹರಿಸಿದ್ದಾರೆ ಎಂಬುದು ಆಕಾಂಕ್ಷಿಗಳ ಅನಿಸಿಕೆ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾವ ರೀತಿಯ ಬೆಂಬಲ ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸುತ್ತಾರೆ.

[t4b-ticker]
error: Content is protected !!