ಸುಳ್ಯ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆದ ನಂದಿ ರಥ ಯಾತ್ರೆ | ಪುತ್ತೂರು ತಾಲೂಕು ಸಮಿತಿಯಿಂದ ಸ್ವಾಗತ

Picture of Savistara

Savistara

Bureau Report

ಸುಳ್ಯ ತಾಲೂಕಿನಲ್ಲಿ ಎರಡು ದಿನಗಳ ಕಾಲ ನಡೆದ ಗೋ ಜಾಗೃತಿಯ ನಂದಿ ರಥಯಾತ್ರೆಯನ್ನು ಇಂದು ವಿದ್ಯುಕ್ತವಾಗಿ ಅಂಚಿನಡ್ಕ ಬಳಿ ಬೀಳ್ಕೊಡಲಾಯಿತು.ನಂದಿ ರಥವನ್ನು ಸುಳ್ಯ ಸ್ವಾಗತ ಸಮಿತಿಯವರು ಪುತ್ತೂರು ಸಮಿತಿಯವರಿಗೆ ಅಂಚಿನಡ್ಕದಲ್ಲಿ ಹಸ್ತಾಂತಿಸಿದರು. ಕುಕ್ಕೆ ಸುಬ್ರಹ್ಮಣ್ಯ ದಿಂದ ಹೊರಟ ನಂದಿ ರಥಯಾತ್ರೆ ಗೆ ಗುತ್ತಿಗಾರು,ಎಲಿಮಲೆ, ದುಗಲಡ್ಕ,ಸುಳ್ಯ,ಜಾಲ್ಸುರ್, ಕನಕಮಜಲು ಲ್ಲಿ ರಥಯಾತ್ರೆಗೆ ಸಾರ್ವಜನಿಕರು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು.

ಪುತ್ತೂರು ತಾಲೂಕು ರಥ ಯಾತ್ರೆ ಸಮಿತಿ ಸಂಚಾಲಕರು ನಂದಿ ಯಾತ್ರೆ ಯನ್ನು ಈ ವೇಳೆ ಬರಮಾಡಿಕೊಂಡರು.ಈ ವೇಳೆ ಸಮಿತಿಯ ಸಂಚಾಲಕರಾದ ರಾಜೇಶ್ ಶೆಟ್ಟಿ ಮೇನಾಳ,ಅವಿನಾಶ್ ಕುರುಂಜಿ,ಎ.ಟಿ. ಕುಸುಮಾಧಾರ,ರಜತ್ ಅಡ್ಕಾರು,ಜಗದೀಶ್ ಡಿ.ಪಿ,ಕಿಶನ್ ಜಬಳೆ,ನಾರಾಯಣ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.

[t4b-ticker]
error: Content is protected !!