ಚಾರ್ಜ್ ಶೀಟ್ ವಿಸ್ತರಣೆ ಅರ್ಜಿ ವಜಾ ಗೊಳಿಸಿದ ಮೈಸೂರು ಜಿಲ್ಲಾ ಪ್ರಧಾನ ಸತ್ರ / ವಿಶೇಷ ( ಕೋಕ) ನ್ಯಾಯಾಲಯ!
ಪ್ರಕರಣ ತನಗೆ ಸಂಬಂಧಿಸಿದ್ದಲ್ಲ ಎಂದು ಕಡತವನ್ನು ಮೈಸೂರು ವಿಶೇಷ ನ್ಯಾಯಾಲಯ ಹಿಂತಿರುಗಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ.ನ್ಯಾಯವಾದಿಗಳಾದ ಮಹೇಶ್ ಕಜೆ,ಪ್ರಸಾದ್ ಕುಮಾರ್ ಬಂಟ್ವಾಳ, ಸಿವಿ ಕೇಶವ ಮೂರ್ತಿ , ರಾಘವೇಂದ್ರ ವಾದಮಂಡನೆ ಮಾಡಿದರು.
ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿ, ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ಭರತ್ ಬಂಧನ ನಡೆದಿತ್ತು.ಕೋಕಾ ಪ್ರಕರಣದಡಿ ಚಾರ್ಜ್ ಶೀಟ್ ಕೋರ್ಟ್ ನಲ್ಲಿ ದಾಖಲಿಸದ ಕಾರಣ ತೀರ್ಪಿನಿಂದ ಪೊಲೀಸರಿಗೆ ಹಿನ್ನಡೆಯಾಗಿದೆ.










































