ಮಂಗಳೂರು: ಕ್ಯಾಂಪ್ಕೋ ದ ಆರು ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು 45.53% ಮತದಾನವಾಗಿದೆ ಕೃಷಿಕ ಮತದಾರರು ನಿರಾಸಕ್ತಿ ತೋರಿದ್ದಾರೆ. ಒಟ್ಟು ಮತದಾರರ 5651 ಪೈಕಿ 2573 ಮಂದಿ ಮತ ಚಲಾಯಿಸಿದ್ದಾರೆ. ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಎಸ್ ಆರ್ ಸತೀಶ್ ಚಂದ್ರ, ದಯಾನಂದ ಹೆಗ್ಡೆ, ಪುರುಷೋತ್ತಮ್ ಭಟ್, ಮಹೇಶ್ ಚೌಟ, ಮುರಳಿಕೃಷ್ಣ ಚಳ್ಳಂಗಾರು, ಎ. ವಿ ತೀರ್ಥರಾಮ ಕಣದಲ್ಲಿದ್ದಾರೆ.ಸ್ವತಂತ್ರ್ಯ ಅಭ್ಯರ್ಥಿ ಎಂ. ಜಿ ಸತ್ಯನಾರಾಯಣ, ರಾಮ್ ತೀರ್ಥ ಸ್ಪರ್ಧಿಸಿದ್ದು ನವೆಂಬರ್ 28 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮೂವತ್ತು ವರ್ಷ ನಂತರ ಕ್ಯಾಂಪ್ಕೋ ಆಡಳಿತ ಮಂಡಳಿ ಗೆ ಚುನಾವಣೆ ನಡೆಯುತ್ತಿದೆ.ಕೇರಳ ಭಾಗದಿಂದ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ.
ಕ್ಯಾಂಪ್ಕೋ ಆರು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ |ನಿರಾಸಕ್ತಿ ತೋರಿದ ಕೃಷಿಕ ಮತದಾರ 45.53% ಮತದಾನ
Savistara
Bureau Report
[t4b-ticker]













































