ಮಂಗಳೂರು: ಕ್ಯಾಂಪ್ಕೊ ಆಡಳಿತ ಮಂಡಳಿಯ ಆರು ಸ್ಥಾನಗಳಿಗೆ ನ.23ರಂದು ಚುನಾವಣೆ ನಡೆದಿದ್ದು, ಇಂದು ಮತ ಏಣಿಕೆ ಪ್ರಕ್ರಿಯೆ ನಡೆಯಿತು. ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧೆಸಿದ್ದ ಎಸ್ ಆರ್ ಸತೀಶಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ, ಪುರುಷೋತ್ತಮ್ ಭಟ್, ಎ. ವಿ ತೀರ್ಥರಾಮ, ಮುರಳಿ ಕೃಷ್ಣ ಚಳ್ಳಂಗಾರು ಜಯಗಳಿಸಿದ್ದಾರೆ.
ಈಗಾಗಲೇ ಕೇರಳ ರಾಜ್ಯದಿಂದ 9 ಜನ ಅವಿರೋಧ ಆಯ್ಕೆಯಾಗಿದ್ದು ಕರ್ನಾಟಕ ದಿಂದ ಹತ್ತು ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ಚುನಾವಣೆ ನಡೆದಿತ್ತು.













































