ಸುಳ್ಯ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಅಭ್ಯಾಸ ವರ್ಗ ನವೆಂಬರ್ 30 ರಂದು ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಅಭ್ಯಾಸ ವರ್ಗದ ಕಾರ್ಯಕ್ರಮ ಉದ್ಘಾಟನೆಯನ್ನು ಪ್ರಾಂತ್ಯ ಸಹ ಸೇವಾ ಪ್ರಮುಖ್ ನ. ಸೀತಾರಾಮ್ ನೆರೆವೇರಿಸಿ ಸಂಘಟನೆ ಬೆಳೆದು ಬಂದ ರೀತಿಯ ಬಗ್ಗೆ ವಿವರಿಸಿದರು.

ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಬಂಗಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿವಿಧ ವಿಷಯಗಳ ಬಗ್ಗೆ ಅವಧಿ ನಡೆಯಿತು ಕ್ಯಾಂಪಸ್ ಅವಧಿಯನ್ನು ಮಂಗಳೂರು ವಿಭಾಗ ಖೇಲೋ ಪ್ರಮುಖ ಶ್ರೀನಂದನ್ ಪವಿತ್ರಮಜಲು,

ಹೋರಾಟ ವಿಚಾರ ಬಗ್ಗೆ ಸರ್ವ ಕಾಲೇಜ್ ಸಂಘ ಅಧ್ಯಕ್ಷ ಮುಳಿಯ ಸಾತ್ವಿಕ್, ಎಬಿವಿಪಿ ಕಾರ್ಯಕರ್ತ ಇಲೈ ಅರಸ್ ನಡೆಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು













































