ನನ್ನನ್ನು ಯಾಕೆ ಹಿಂಡುತ್ತಿದ್ದೀರಾ, ಬ್ಯಾಲನ್ಸ್ ಯಾವಾಗ ಸೆಟ್ಲ್ ಮಾಡ್ತೀರಾ : ಸರ್ಕಾರಕ್ಕೆ ವಿಜಯ್ ಮಲ್ಯ ಪ್ರಶ್ನೆ

Picture of Savistara

Savistara

Bureau Report

ಲಂಡನ್ : ಹಲವು ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ, ಲಂಡನ್ ನಲ್ಲಿ ನೆಲೆಸಿರುವ ಮಾಜಿ ರಾಜ್ಯಸಭಾ ಸದಸ್ಯ ಮತ್ತು ಯುಬಿ ಸಂಸ್ಥೆಯ ಅಧ್ಯಕ್ಷ ವಿಜಯ್ ಮಲ್ಯ, ಭಾರತದ ಹಣಕಾಸು ಸಚಿವಾಲಯಕ್ಕೆ ಗಂಭೀರ ಪ್ರಶ್ನೆಯನ್ನು ಕೇಳಿದ್ದಾರೆ. ಈ ಸಂಬಂಧ, ಟ್ವೀಟ್ ಮಾಡಿದ್ದಾರೆ.ನನ್ನಿಂದ ಹೆಚ್ಚುವರಿಯಾಗಿ ರಿಕವರಿ ಮಾಡಿಕೊಂಡಿರುವ ಹಣದ ಲೆಕ್ಕ ಯಾವಾಗ ಕೊಡುತ್ತೀರಾ ಮತ್ತು ಯಾವಾಗ ಚುಕ್ತಾ ಮಾಡುತ್ತೀರಾ ಎಂದು ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ. ಲಂಡನ್ ನಲ್ಲಿ ಕೂತು, ಕರ್ನಾಟಕ ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದು ಕಡೆ, ಅವರನ್ನು ಗಡೀಪಾರು ಮಾಡಲು, ಕಾನೂನು ಹೋರಾಟವೂ ನಡೆಯುತ್ತಿದೆ.ನವೆಂಬರ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ಅರ್ಜಿಯನ್ನು ಸಲ್ಲಿಸಿದ್ದರು. ಸರ್ಕಾರ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ನನ್ನನ್ನು ಮತ್ತು ಸಾರ್ವಜನಿಕರಿಗೆ ಯಾಕೆ ಮೋಸ ಮಾಡುತ್ತಿದೆ ಎಂದು ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಅವರು ಪೋಡ್ ಕಾಸ್ಟ್ ನಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು.ಕೆಲವು ಗಂಟೆಯ ಕೆಳಗೆ ಟ್ವೀಟ್ (ಎಕ್ಸ್) ಮಾಡಿರುವ ವಿಜಯ್ ಮಲ್ಯ, ” ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ನನ್ನ ವಿಷಯವನ್ನು ಪ್ರಸ್ತಾವಿಸುತ್ತಾರೆ. ನನ್ನಿಂದ ಇದುವರೆಗೆ, 14,100 ಕೋಟಿ ರೂಪಾಯಿ ವಸೂಲು ಮಾಡಿರುವುದಾಗಿ ಹೇಳುತ್ತಾರೆ. ಆದರೆ, ಇವರ ಹೇಳಿಕೆಗೂ, ಬ್ಯಾಂಕ್ ಹೇಳಿಕೆಯಲ್ಲಿ ವ್ಯತ್ಯಾಸವಿದೆ” ಎಂದು ಎಕ್ಸ್ ಮೂಲಕ ತಿಳಿಸಿದ್ದಾರೆ.ಸಾರ್ವಜನಿಕ ವಲಯದ ಬ್ಯಾಂಕುಗಳು ನನ್ನಿಂದ ಹತ್ತು ಸಾವಿರ ಕೋಟಿ ರೂಪಾಯಿ ವಸೂಲಿ ಮಾಡಿರುವುದಾಗಿ ತಿಳಿಸಿವೆ. ಕೇಂದ್ರ ಹಣಕಾಸು ಸಚಿವರು 14,100 ಕೋಟಿ ಎಂದು ಹೇಳುತ್ತಿದ್ದಾರೆ. ಹಾಗಾದರೆ, ನಾಲ್ಕು ಸಾವಿರ ಕೋಟಿ ವ್ಯತ್ಯಾಸಕ್ಕೆ ಕಾರಣವೇನು ಎನ್ನುವುದನ್ನು ಸ್ಪಷ್ಟ ಪಡಿಸಲಿ ಎಂದು ವಿಜಯ್ ಮಲ್ಯ ಒತ್ತಾಯಿಸಿದ್ದಾರೆ.ಈಗ, ಇನ್ನೊಂದು ರೀತಿಯ ಹೇಳಿಕೆಯು ಹಣಕಾಸು ಸಚಿವಾಲಯದಿಂದ ಬರುತ್ತಿದೆ. ನಾನು ಇನ್ನೂ ಹತ್ತು ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ಬ್ಯಾಂಕುಗಳು ಏಳು ಸಾವಿರ ಕೋಟಿ ಬಾಕಿ ಎನ್ನುತ್ತಿವೆ. ಇದುವರೆಗೆ ನನ್ನಿಂದ ವಸೂಲು ಮಾಡಿರುವ ದುಡ್ಡಿಗೆ ಯಾವ ಲೆಕ್ಕವನ್ನು ಅಥವಾ ಸ್ಟೇಟ್ಮೆಂಟ್ ನೀಡುತ್ತಿಲ್ಲ ಎಂದು ವಿಜಯ್ ಮಲ್ಯ ಗಂಭೀರ ಆರೋಪವನ್ನು ಮಾಡಿದ್ದಾರೆ.ನಿಜಾಂಶವನ್ನು ತಿಳಿಯಲು ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ತನಿಖೆ ನಡೆಸಬಾರದೇ? ನನಗೆ ಯಾಕೆ ಈ ರೀತಿಯ ದುರದೃಷ್ಟಕರ ಪರಿಸ್ಥಿತಿ? ಹಣಕಾಸು ಸಚಿವಾಲಯ ಮತ್ತು ಬ್ಯಾಂಕಿನ ಹೇಳಿಕೆಯಲ್ಲಿ ದೊಡ್ಡ ವ್ಯತ್ಯಾಸವಿದೆ. ನಾಲ್ಕು ಸಾವಿರ ಕೋಟಿ ವ್ಯತ್ಯಾಸದ ಬಗ್ಗೆ ಸ್ಪಷ್ಟತೆಯಿಲ್ಲ. ನಾನು ಹೆಚ್ಚುವರಿಯಾಗಿ ಪಾವತಿಸಿದ್ದರೆ, ಅದರ ಸೆಟ್ಲಮೆಂಟ್ ಯಾವಾಗ ಎಂದು ವಿಜಯ್ ಮಲ್ಯ ಪ್ರಶ್ನಿಸಿದ್ದಾರೆನನ್ನಿಂದ ವಸೂಲಾದ ದುಡ್ಡನ್ನು ನನ್ನ ಖಾತೆಗೆ ಜಮೆ ಮಾಡಲಿಲ್ಲ. ಮೂಲ ತೀರ್ಪಿನ ಪ್ರಕಾರ, 6,203 ಕೋಟಿ ರೂಪಾಯಿ ನಾನು ಪಾವತಿಸಬೇಕಾಗಿತ್ತು. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಈಗಾಗಲೇ ರಿಕವರಿ ಮಾಡಲಾಗಿದೆ, ಯಾಕೆ ನನ್ನನ್ನು ಈ ರೀತಿ ಹಿಂಡುತ್ತಿದ್ದಾರೆ ಎಂದು ಯುಬಿ ಸಂಸ್ಥೆಯ ಮಾಲೀಕ ವಿಜಯ್ ಮಲ್ಯ ನೋವು ತೋಡಿಕೊಂಡಿದ್ದಾರೆ.ನನ್ನಿಂದ ಹೆಚ್ಚುವರಿ ಹಣವನ್ನು ವಸೂಲು ಮಾಡಲಾಗಿದೆ, ಆದರೆ, ಅದರ ಲೆಕ್ಕವನ್ನು ಬ್ಯಾಂಕುಗಳು ಕೊಡುತ್ತಿಲ್ಲ. ಸ್ಟೇಟ್ಮೆಂಟ್ ಆಫ್ ಅಕೌಂಟ್ಸ್ ಅನ್ನು ನೀಡಲು, ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕೆಂದು, ವಿಜಯ್ ಮಲ್ಯ, ಲಂಡನ್ ನಲ್ಲಿ ಕೂತು, ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

[t4b-ticker]
error: Content is protected !!