ಕೆಎನ್‌ ರಾಜಣ್ಣ ರಿವರ್ಸ್‌ ಎಫೆಕ್ಟ್‌, ಸೇಡಿಗಾಗಿ ಕಾತರ, ಡಿಕೆ ಶಿವಕುಮಾರ್‌ ಮುಂದೆ ಬಿಗ್‌-3 ಸವಾಲು

Picture of Savistara

Savistara

Bureau Report

ಪ್ರಭಾವಿ ಸಚಿವ ಕೆಎನ್‌ ರಾಜಣ್ಣನವರ ಒಂದೇ ಒಂದು ವಜಾ ಈಗ ಕಾಂಗ್ರೆಸ್‌ ಪಾಳೆಯದಲ್ಲಿ ಹಲವು ಗುದ್ದಾಟಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಏನೇ ಬೆಳವಣಿಗೆ ನಡೆದ್ರು ಅದು ಬಂದು ಕೊನೆಗೆ ನಿಲ್ಲುವುದು ಸಿದ್ದು ಹಾಗೂ ಡಿಕೆಶಿ ಪ್ರತಿಷ್ಠಿತ ಕಣದಲ್ಲಿ, ಈಗ ರಾಜಣ್ಣ ವಿಚಾರದಲ್ಲೂ ಅದೇ ಆಗಿದೆ. ತೆರೆಮರೆಯಲ್ಲಿ ಈಗ ಮತ್ತೊಂದು ಅಖಾಡ ಸಿದ್ಧವಾಗಿದೆ. ಕೆಎನ್. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ಕೇವಲ ಒಂದು ಖಾತೆ ಬದಲಾವಣೆಯಲ್ಲ, ಬದಲಿಗೆ ಕಾಂಗ್ರೆಸ್‌ನ ಆಂತರಿಕ ಶಕ್ತಿ ಪ್ರದರ್ಶನದ ಹೊಸ ಅಖಾಡಕ್ಕೆ ನಾಂದಿ ಹಾಡಿದೆ. ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಗಳಾದ ಕೆಎಂಎಫ್ ಮತ್ತು ಅಪೆಕ್ಸ್ ಬ್ಯಾಂಕ್‌ ಮೇಲೆ ಹಿಡಿತ ಸಾಧಿಸಲು ಈಗ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವೆ ಶೀತಲ ಸಮರ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

[t4b-ticker]
error: Content is protected !!