Darshan- SC landmark Judgement : ತೀರ್ಪಿನ ಪ್ರತಿಯನ್ನು ದೇಶದೆಲ್ಲೆಡೆ ಕಳುಹಿಸಲು ಆದೇಶ – ಕಾರಣವೇನು?

Picture of Savistara

Savistara

Bureau Report

ಹೊಸದಿಲ್ಲಿ / ಬೆಂಗಳೂರು : ಕೆಲವು ದಿನಗಳ ಹಿಂದೆ ಕನ್ನಡದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜಾಮೀನು ವಿಚಾರಣೆ ನಡೆಸಿದ ಸಂದರ್ಭದಲ್ಲೇ, ಅವರಿಗೆ ಮತ್ತು ಇತರ ಆರೋಪಿಗಳಿಗೆ ಜಾಮೀನು ಸಿಗುವುದು ಸಂಶಯ ಎನ್ನುವಂತಿತ್ತು. ಯಾಕೆಂದರೆ, ಸರ್ವೋಚ್ಚ ನ್ಯಾಯಾಲಯ ಕೇಸಿನ ಅವಲೋಕನವನ್ನು ಆ ರೀತಿ ಮಾಡಿತ್ತು.

ಈಗ, ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನು ವಿಚಾರಣೆಯ ತೀರ್ಪನ್ನು ಟಾಪ್ ಕೋರ್ಟ್ ಪ್ರಕಟಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದು ಮಾಡಿದೆ. ಇದೊಂದು, ಲ್ಯಾಂಡ್ ಮಾರ್ಕ್ ಜಡ್ಜಮೆಂಟ್ ಎಂದು ಟಾಪ್ ಕೋರ್ಟ್ ಹೇಳಿದೆ.

ತಕ್ಷಣದಿಂದಲೇ ಆರೋಪಿಗಳನ್ನು ಬಂಧಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ತೀರ್ಪಿನ ಪ್ರತಿಯನ್ನು ದೇಶದ ಎಲ್ಲಾ ಸರ್ಕಾರದ ಗೃಹ ಇಲಾಖೆಗೆ ಮತ್ತು ಉಚ್ಚ ನ್ಯಾಯಾಯಲಕ್ಕೆ ಕಳುಹಿಸಲು ದ್ವಿಸದಸ್ಯ ಪೀಠ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಆರ್.ಮಹದೇವನ್ ಅವರಿದ್ದ ಪೀಠ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯೂನ್ಯತೆಗಳನ್ನು ಎತ್ತಿ ತೋರಿಸಿವೆ. ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಇದನ್ನು ಎಚ್ಚರಿಕೆಯೆಂದು ತಿಳಿದುಕೊಳ್ಳಿ. ಮತ್ತೊಮ್ಮೆ ನಾವು ಯಾವುದೇ ವ್ಯಕ್ತಿ ಜೈಲಿನಲ್ಲಿ ರಾಜಾತಿಥ್ಯವನ್ನು ಪಡೆಯುವುದನ್ನು ಗಮನಿಸಿದರೆ ರಾಜ್ಯ ಸರ್ಕಾರವಾದ ನಿಮಗೆ ಮೊದಲು ಸಮನ್ಸ್‌ ನೀಡಲಾಗುತ್ತದೆ. ಈ ತೀರ್ಪಿನ ಪ್ರತಿಯನ್ನು ಎಲ್ಲ ಹೈಕೋರ್ಟ್‌ಗಳಿಗೆ, ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಡುವಂತೆ ಪೀಠಕ್ಕೆ ನ್ಯಾ. ಪಾರ್ದಿವಾಲಾ ಸೂಚನೆಯನ್ನು ನೀಡಿದ್ದಾರೆ.

ವಿವಿಐಪಿ ಆರೋಪಿಗಳನ್ನು ಜೈಲಿನಲ್ಲಿ ರಾಜರಂತೆ ನೋಡಿಕೊಳ್ಳುವ ಹಲವು ಪ್ರಕರಣಗಳು ನಮ್ಮ ಮುಂದೆ ಇರುವ ಹೊತ್ತಿನಲ್ಲಿ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಭಾರೀ ಮಹತ್ವವನ್ನು ಪಡೆದುಕೊಂಡಿದೆ. ಜೊತೆಗೆ, ಕೇವಲ ವಿಚಾರಣಾ ನ್ಯಾಯಾಲಯದ ಅಧಿಕಾರವಾದ ಸಾಕ್ಷ್ಯಗಳ ಹೇಳಿಕೆಯನ್ನು ಹೈಕೋರ್ಟ್‌ ಬಳಸಿದ್ದನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಖಂಡಿಸಿದೆ.

ಜುಲೈ 24ರಂದು, ದ್ವಿಸದಸ್ಯ ಪೀಠ, ವಿಚಾರಣೆಯನ್ನು ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ದರ್ಶನ್ ಮತ್ತು ಇತರ ಆರೋಪಿಗಳ ಕೇಸಿನ ತೀರ್ಪನ್ನು ನೀಡುವ ಮೊದಲು ನ್ಯಾ. ಪಾರ್ದಿವಾಲಾ ನೀಡಿದ ಹೇಳಿಕೆಯ ಬುಲೆಟ್ ಪಾಯಿಂಟ್ಸ್ ಹೀಗಿದೆ :

  • ನಾವು ಇಂದು ನೀಡುತ್ತಿರುವ ತೀರ್ಪು ದೇಶದ ಇತಿಹಾಸದಲ್ಲಿ ಮೈಲಿಗಲ್ಲು. ಕಾನೂನಿಗಿಂತ ಯಾರೂ ದೊಡ್ಡವರಲ್ಲ
  • ಆರೋಪಿಗಳು ಎಷ್ಟೇ ದೊಡ್ಡವರಾಗಿರಲಿ, ಚಿಕ್ಕವರಾಗಿರಲಿ ಕಾನೂನಿನ ಮುಂದೆ ಶರಣಾಗಲೇಬೇಕು
  • ದೇಶದ ಕಾನೂನಿನ ವ್ಯವಸ್ಥೆಯಲ್ಲಿನ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸುತ್ತದೆ
  • ಕಾನೂನು ವ್ಯವಸ್ಥೆಗೆ ವಿಧೇಯರಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ
  • ಆರೋಪಿಗಳಿಗೆ ರಾಜಾತಿಥ್ಯ ಅಥವಾ ವಿಶೇಷ ಸೌಲಭ್ಯ ನೀಡುವುದು ಗಮನಕ್ಕೆ ಬಂದರೆ, ಜೈಲಾಧಿಕಾರಿಗಳನ್ನು ಅಮಾನತುಗೊಳಿಸ ಬೇಕಾದೀತು
  • ಈ ಕೇಸಿನ ಆತಿಥ್ಯದ ವಿಚಾರದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಬೇಕಾದೀತು.
  • ನಾವು ಇಂದು ಕೊಡುತ್ತಿರುವ ತೀರ್ಪಿನ ಪ್ರತಿ, ದೇಶದ ಎಲ್ಲಾ ರಾಜ್ಯ ಸರ್ಕಾರ ಮತ್ತು ಹೈಕೋರ್ಟಿಗೆ ಕಳುಹಿಸಲು ಸೂಚನೆಯನ್ನು ನೀಡಲಾಗಿದೆ.
  • ಇಂದು ಕೊಡುತ್ತಿರುವ ತೀರ್ಪು, ರಾಜ್ಯದ ಎಲ್ಲಾ ಜೈಲು ಅಧೀಕ್ಷಕರಿಗೆ ಎಚ್ಚರಿಕೆಯ ಸಂದೇಶವಾಗಲಿ.
  • ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಎನ್ನುವುದು ಸುಪ್ರೀಂಕೋರ್ಟ್ ಪೀಠದ ಆಶಯ.
[t4b-ticker]
error: Content is protected !!