ಶಾಸಕ ಸತೀಶ ಸೈಲ್‌ ಮನೆಯಲ್ಲಿ ಸಿಕ್ಕಿದ್ದು ಕೋಟಿ ನಗದು, ಕೆಜಿಗಟ್ಟಲೆ ಚಿನ್ನ: ಇ.ಡಿ

Picture of Savistara

Savistara

Bureau Report

ಕಾರವಾರ: ಶಾಸಕ ಸತೀಶ ಸೈಲ್ ಮನೆ ಮೇಲೆ ಎರಡು ದಿನಗಳ ಹಿಂದೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋಟ್ಯಂತರ ನಗದು, ಕೆಜಿಗಟ್ಟಲೆ ಬಂಗಾರ ವಶಕ್ಕೆ ಪಡೆದಿದ್ದಾರೆ.

‘ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹಣಕಾಸು ವಹಿವಾಟು ಮಾಹಿತಿ ಆಧರಿಸಿ ಕಾರವಾರ ಶಾಸಕ ಸತೀಶ ಸೈಲ್ ಅವರ ನಿವಾಸ, ಈ ಪ್ರಕರಣದಲ್ಲಿ ಭಾಗಿಯಾದ ಇನ್ನಿತರರ ಕಚೇರಿ ನಿವಾಸಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು.

ಕಾರವಾರ, ದೆಹಲಿ, ಗೋವಾ, ಮುಂಬೈನ ವಿವಿಧೆಡೆ ಪರಿಶೀಲನೆಯನ್ನು ಇ.ಡಿಯ ಬೆಂಗಳೂರು ವಿಭಾಗದ ತಂಡ ಕೈಗೊಂಡಿತ್ತು’ ಎಂದು ಜಾರಿ ನಿರ್ದೇಶನಾಲಯ ತನ್ನ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.’ಪರಿಶೀಲನೆ ನಡೆಸಿದ ವೇಳೆ ₹1.68 ಕೋಟಿ ನಗದು, 6.75 ಕೆ.ಜಿ ತೂಕದಷ್ಟು ಬಂಗಾರದ ಆಭರಣ ಹಾಗೂ ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರ ಬ್ಯಾಂಕ್ ಖಾತೆಯಲ್ಲಿ ಅಂದಾಜು ₹14.13 ಕೋಟಿ ಮೊತ್ತವನ್ನು ತಡೆಹಿಡಿಯಲಾಗಿದೆ’ ಎಂದು ತಿಳಿಸಿದೆ.

[t4b-ticker]
error: Content is protected !!